ಛತ್ತೀಸ್ ಗಡದ 'ಪಂತಿ ನೃತ್ಯ', ಆಂಧ್ರಪ್ರದೇಶದ 'ಕರ್ರಾಸಾಮು', 'ವೀರ ನಾಟ್ಯಂ', ಕೇರಳದ 'ಕೋಲ್ ಕಳಿ', 'ಕಲರಿ ಪಯನ್', ಪುದುಚೇರಿಯ 'ಸೆಲಬಂ ಕಲಾಳಕಚೈ', ತಮಿಳುನಾಡಿನ 'ಸೆಲಂಬಾಟಂ', ಕರ್ನಾಟಕದ ಡೊಳ್ಳು ಕುಣಿತ, ಮಲ್ಲಕಂಬ ಹಾಗೂ ದೊಣ್ಣೆವರಸೆ ಪ್ರದರ್ಶನ ಪ್ರೇಕ್ಷಕರ ಗಮನ ಸೆಳೆಯಿತು. ಭಾನುವಾರ ಬೆಳಿಗ್ಗೆ ನಿಧನರಾದ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.