ಮಳವಳ್ಳಿಯ ಪ್ರವೀಣ್ ಎಂಬ ಯುವ ರೈತ ಯೋಗೇಶ್ವರ್ಗೆ ಕರೆ ಮಾಡಿದ್ದು, ರೈತರಾದ ಕಾರಣ ತಮ್ಮನ್ನೂ ಒಳಗೊಂಡು ಗ್ರಾಮದ ಯುವಕರಿಗೆ ಯಾರೂ ಹೆಣ್ಣು ಕೊಡಲು ಮುಂದೆ ಬರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾನೆ. ಸುಮಾರು 1ನಿಮಿಷ 40 ಸೆಕೆಂಡ್ ಇರುವ ಸಂಭಾಷಣೆಯಲ್ಲಿ ಈ ಯುವಕ ‘ರೈತನಾದವನಿಗೆ 35 ವರ್ಷ ಕಳೆದರೂ ಹೆಣ್ಣು ಸಿಗುತ್ತಿಲ್ಲ. ಅದೇ ಪಟ್ಟಣದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರೂ ಅಂತವರಿಗೆ ಹೆಣ್ಣು ಸಿಗುತ್ತಿದೆ. ಹಾಗಾಗಿ ತಮ್ಮ ಸರ್ಕಾರದಲ್ಲಿ ಯಾವುದಾದರೂ ಕಾಯ್ದೆ ಮಾಡಿ ರೈತರನ್ನು ಮದುವೆಯಾಗುವ ಹೆಣ್ಣುಗಳಿಗೆ ಸಹಾಯಧನ ನೀಡುವ ಯೋಜನೆ ಜಾರಿಗೆ ತರಬೇಕು’ ಸಚಿವರಿಗೆ ಬೇಡಿಕೆ ಸಲ್ಲಿಸಿದ್ದಾನೆ.