ಮಾಗಡಿ: ಪತ್ನಿಯ ಮನೆಯಲ್ಲಿ ಗೌರಿ ಹಬ್ಬ ಮುಗಿಸಿಕೊಂಡು ಬೆಂಗಳೂರಿಗೆ ತೆರಳುವಾಗ, ಪಟ್ಟಣದ ಕಲ್ಯಾಬಾಗಿಲು ಬಳಿ ಕುಸಿದು ಬಿದ್ದು ವ್ಯಕ್ತಿ ಮೃತಪಟ್ಟಿರುವ ಘಟನೆ ಭಾನುವಾರ ಸಂಜೆ ನಡೆದಿದೆ.
ಮೃತರನ್ನುಹಿಪ್ಪಾಡಿ ಸಮೀಪದ ಸಿಗೇಹಳ್ಳಿ ಗಂಗಯ್ಯ ಅವರ ಪುತ್ರ ಎಸ್.ಜಿ ರಾಜೇಶ್ (26) ಎಂದು ಗುರುತಿಸಲಾಗಿದೆ. ತಾಲ್ಲೂಕಿನ ಹೂಜುಗಲ್ ಪ್ರವೀಳಾ ಅವರೊಂದಿಗೆ ಕಳೆದ 9 ತಿಂಗಳ ಹಿಂದೆ ವಿವಾಹವಾಗಿದ್ದರು. ಬೆಂಗಳೂರಿನ ಕಲ್ಯಾಣ ನಗರದಲ್ಲಿನ ಖಾಸಗಿ ಕಂಪನಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು.
ಕುಸಿದು ಬಿದ್ದ ತಕ್ಷಣ ಬಾಯಿಯಲ್ಲಿ ರಕ್ತ ಸುರಿದಿದೆ. ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.