ಪ್ರಚಾರದ ಸಮಯದಲ್ಲಿ ಬಿಸಿಲನ್ನೂ ಲೆಕ್ಕಿಸದೆ ಭಾರಿ ಸಂಖ್ಯೆಯ ಜನರೂ ಬಂದಿದ್ದರು. ಅಮಿತ್ ಶಾ, ನಿರ್ಮಲ ಸೀತಾರಾಮನ್ ಕ್ಷೇತ್ರಕ್ಕೆ ಭೇಟಿ ನೀಡಿಬಿಜೆಪಿ ಬೆಂಬಲಿಸುವಂತೆಮನವಿ ಮಾಡಿದ್ದರು. ಯಡಿಯೂರಪ್ಪ ಅವರು ಸೇರಿ ಪಕ್ಷದ ಎಲ್ಲ ಶಾಸಕರು, ಮುಖಂಡರು ಶ್ರಮಿಸಿದ್ದರು. ಕಾರ್ಯಕರ್ತರು ಪ್ರತಿ ಬೂತ್ಮಟ್ಟಕ್ಕೂ ತೆರಳಿ ಪಕ್ಷದ ಧ್ಯೇಯ, ಕಾರ್ಯಕರ್ತರ ಸಾಧನೆ ಜನರಿಗೆ ತಲುಪಿಸಿದ್ದರು. ನಿರೀಕ್ಷೆಗೂ ಮೀರಿ ಜನರು ಗೆಲ್ಲಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.