ಸಾಗರ: ತಾಲ್ಲೂಕಿನ ಕಾನೂರು ಗ್ರಾಮದ ಜಯಶಂಕರ್ ಎಂಬುವವರಿಗೆ ಮಂಗನ ಕಾಯಿಲೆ ಸೋಂಕು ತಗುಲಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ಮರಳಿದ್ದರು.
ಮಂಗಳವಾರ ಮತ್ತೆ ಅವರು ಅಸ್ವಸ್ಥರಾದ ಕಾರಣ ಮಣಿಪಾಲದ ಆಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸಲಾಗಿದೆ. ಇದರೊಂದಿಗೆ ತಾಲ್ಲೂಕಿನ ಆರು ಮಂದಿ ಮಣಿಪಾಲದ ಆಸ್ಪತ್ರೆಗೆ ಸೇರಿದಂತಾಗಿದೆ.
ಸೋಮವಾರ ಆಸ್ಪತ್ರೆಗೆ ದಾಖಲಾಗಿರುವ ಆರು ವರ್ಷದ ಮಗು ಸಮರ್ಥನ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ. ಗುಣಮುಖನಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುವ ಸಚಿನ್ ಖಾಸಗಿ ವಾಹನದ ಮೂಲಕ ಊರಿಗೆ ಮರಳಿದ್ದಾರೆ.