ಚುನಾವಣೆಯಲ್ಲಿ ಅವರು ಗೆಲುವು ಸಾಧಿಸಿದ ಬಳಿಕ ಕುಮಟಾದ ಎ.ವಿ.ಬಾಳಿಗಾ ಕಾಲೇಜಿನ ಮತ ಎಣಿಕೆ ಕೇಂದ್ರದಿಂದ ವಾಪಸಾಗಿ ಅಂಕೋಲಾದ ಶಾಂತದುರ್ಗಾ ದೇವಸ್ಥಾನದಲ್ಲಿ ತೆರಳಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಎರಡು ತೆಂಗಿನಕಾಯಿಗಳು ಹಾಗೂ ಹೂವು ಇಡಲಾಗಿದ್ದ ತಟ್ಟೆಯನ್ನು ಹಿಡಿದುಕೊಂಡಿದ್ದ ಅವರು, ‘ಅಮ್ಮಾ.. ಅಮ್ಮಾ..’ ಎಂದು ಕೂಗಿಕೊಂಡು ಬಳಲಿದಂತಾಗಿ ಮಂಡಿಯೂರಿ ಕುಳಿತರು. ಅವರ ಜತೆಗಿದ್ದವರು ಕೂಡಲೇ ಸಮಾಧಾನ ಮಾಡಿ ಆರೈಕೆ ಮಾಡಿದರು.