ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಕಂಪನಿ ಸಾರ್ವಜನಿಕರಿಂದ ಲಕ್ಷಾಂತರ ರೂಪಾಯಿ ಠೇವಣಿ ಪಡೆದು ವಾಪಸ್ ನೀಡದೆ ಸತಾಯಿಸುತ್ತಿದೆ. ಇದರ ವಿರುದ್ಧ ಹಿತರಕ್ಷಣಾ ಸಮಿತಿ ಹೋರಾಟ ಮಾಡುತ್ತಲೇ ಬಂದಿದೆ. ಮೊಕದ್ದಮೆಯೂ ದಾಖಲಾಗಿದೆ. ಈ ಹೋರಾಟದ ಫಲವಾಗಿ ಪ್ರಕರಣವನ್ನು ಸಿಒಡಿಗೆ ವಹಿಸಲಾಗಿತ್ತು. ಇದರ ತನಿಖೆ ನಡೆದು ಕಂಪನಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಆದೇಶ ಹೊರಬಿದ್ದಿದೆ’ ಎಂದು ಅವರು ತಿಳಿಸಿದ್ದಾರೆ.