ಚೆನ್ನೈ : ತಮಿಳುನಾಡಿನ ರಾಜಕೀಯ ರಂಗವನ್ನು ಇತ್ತೀಚೆಗೆ ಪ್ರವೇಶಿಸಿರುವ ಚಿತ್ರನಟ ರಜನಿಕಾಂತ್ ಅವರು ಹಿಮಾಲಯಕ್ಕೆ ಶನಿವಾರ ತೆರಳಲಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ಒಂದು ದಶಕದ ಬಳಿಕ 67ರ ವಯೋಮಾನದ ಸಿನಿ ತಾರೆ ರಜನಿ ಹಿಮಾಲಯದ ದುನಗಿರಿ ಪ್ರದೇಶದ ಗುಹೆಗಳಿಗೆ ಭೇಟಿ ನೀಡುತ್ತಿದ್ದಾರೆ. ಈ ಗುಹೆಗಳಲ್ಲಿ ಮಹಾವತಾರ ಬಾಬಾಜಿ ಎಂಬ ಮುನಿಯ ಆತ್ಮ ನೆಲೆಸಿದೆ ಎಂಬ ನಂಬಿಕೆ ಇದೆ.