ಈ ಬಾರಿ ನಿರಂಜನಕುಮಾರ್ ಅವರು ಸತತ ಸೋಲನ್ನೇ ಗೆಲುವಿನ ಮೆಟ್ಟಿಲನ್ನಾಗಿಸಿಕೊಂಡಿದ್ದು ವಿಶೇಷ ವಾಗಿತ್ತು. ಪ್ರಚಾರದಲ್ಲಿ ಕಾಂಗ್ರೆಸ್ ವಿರುದ್ಧದ ಟೀಕೆಗಿಗಿಂತ ಹೆಚ್ಚಾಗಿ ಸೋಲನ್ನೇ ಅಸ್ತ್ರವಾಗಿ ಪ್ರಯೋಗಿಸಿದರು. ಇವರ ಮಾತುಗಳಿಗೆ ಕರಗಿದ ಮತದಾರ ಇವರಿಗೆ ಗೆಲುವಿಗೆ ಮುನ್ನುಡಿ ಬರೆದಿದ್ದಾರೆ. ಇವರು ಆಯ್ಕೆಯಾದ ಅಂತರವೂ ವಿಶೇಷ ಎನಿಸಿದೆ. ಇವರು ಗಳಿಸಿದ 16,684 ಮತಗಳ ಅಂತರ ಜಿಲ್ಲೆಯಲ್ಲಿ ಪಡೆದ 2ನೇ ಅತಿದೊಡ್ಡ ಅಂತರ. ಎಚ್.ಎಸ್. ಮಹದೇವಪ್ರಸಾದ್ ಅವರು 1994ರಲ್ಲಿ ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಜನತಾದಳದಿಂದ ಸ್ಪರ್ಧಿಸಿ 24,056 ಅಂತರದಿಂದ ಗೆದ್ದಿದ್ದರು, ಅಂದಿನಿಂದ ಇಂದಿನವರೆಗೆ ಯಾವ ಅಭ್ಯರ್ಥಿಯು ಇಷ್ಟು ಅಂತರದ ಬಹುಮತ ಪಡೆದ ಉದಾಹರಣೆಗಳಿಲ್ಲ.