‘364 ದಿನಗಳೂ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಜನರ ಜತೆ ಬೆರೆತರೆ ಸುಖ ಮತ್ತು ತೃಪ್ತಿ ಇರುತ್ತದೆ. ಹೊಗಳಿಕೆ ಕಿರೀಟವಲ್ಲ, ಅದು ನಮ್ಮ ಕೆಲಸಗಳಿಗೆ ಪ್ರೇರಕ.ಕಡತಗಳ ವಿಲೇವಾರಿ, ರಸ್ತೆಗಳ ರಿಪೇರಿ ಇವಷ್ಟೇ ಕೆಲಸವಲ್ಲ. ಇಡೀ ಸಮಾಜದ ಪರಿವರ್ತನೆಗೆ ಚಿಂತಿಸುವುದು ಒಬ್ಬ ಒಳ್ಳೆಯ ಅಧಿಕಾರಿಯ ಲಕ್ಷಣ. ಮುಖ್ಯವಾಗಿ ಯುವಕರ ಮನಸ್ಸು ತಲುಪಬೇಕಿದೆ. ಸಮಾಜವನ್ನು ಸಾಂಸ್ಕೃತಿಕ, ಸಾಹಿತ್ಯ ಹಾಗೂ ಅಭಿವೃದ್ಧಿಯತ್ತ ತೆಗೆದುಕೊಂಡು ಹೋಗುವುದೇ ಅಧಿಕಾರಿಗಳ ಕೆಲಸ ಎಂದು ವಿಶ್ಲೇಷಿಸಿದರು.