ಇದೇ ಶಾಲೆಯಲ್ಲಿ ಎರಡು ವರ್ಷಗಳ ಹಿಂದೆ ಶಿಕ್ಷಕರಾಗಿದ್ದ ರಾಜು, ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುತ್ತಿದ್ದುದಾಗಿ ವಿದ್ಯಾರ್ಥಿನಿಯರು ದೂರಿದ್ದಾರೆ. ಶುಕ್ರವಾರಶಾಲೆಯ ತಪಾಸಣೆಗೆ ತೆರಳಿದ್ದು, ವಿದ್ಯಾರ್ಥಿನಿಯನ್ನು ಬೆಳಿಗ್ಗೆ 9.45ರ ವೇಳೆಯಲ್ಲಿ ‘ನಲಿ ಕಲಿ’ ಕೊಠಡಿಗೆ ಕರೆದೊಯ್ದು ಕಿರುಕುಳ ನೀಡುತ್ತಿದ್ದುದನ್ನು ವಿದ್ಯಾರ್ಥಿನಿಯೊಬ್ಬಳು ಗಮನಿಸಿದ್ದಳು. ಆಕೆ ಬಾಗಿಲು ಬಡಿದು, ಕೂಗಾಡಿದ್ದಾಳೆ. ಪೋಷಕರು ಸ್ಥಳಕ್ಕೆ ಬರುವ ವೇಳೆಗೆ ರಾಜು ಪರಾರಿಯಾದುದಾಗಿ ತಿಳಿದುಬಂದಿದೆ.