ಅಂದು ಮಧ್ಯಾಹ್ನ 2.30ಕ್ಕೆ ಕುವೆಂಪು ರಂಗಮಂದಿರದಲ್ಲಿ ಆರಂಭವಾಗಬೇಕಿದ್ದ ಉತ್ಸವದ ಮೆರವಣಿಗೆ, ಮಧ್ಯಾಹ್ನ 3ಕ್ಕೆ ಅಂಬೇಡ್ಕರ್ ಭವನದಲ್ಲಿ ನಿಗದಿಯಾಗಿದ್ದ ಫಲಪುಷ್ಪ ಪ್ರದರ್ಶನ ಉದ್ಘಾಟನೆ ಕಾರ್ಯಕ್ರಮಗಳೂ 24ಕ್ಕೆ ಮುಂದೂಡಲ್ಪಟ್ಟಿವೆ.ಅದೇ ಸಮಯಕ್ಕೆ ನಡೆಯಲಿವೆ.23ರ ಸಂಜೆ ವಿವಿಧ ರಾಜ್ಯಗಳ 223 ಕಲಾವಿದರು ಪ್ರದರ್ಶಿಸಬೇಕಿದ್ದ ‘ಜಾನಪದ ಭಾರತ ನೃತ್ಯರೂಪಕ’ 24ರ ಸಂಜೆ ಮುಂದುವರಿಯಲಿವೆ. ಉಳಿದಂತೆ 24ರಿಂದ 27ರವರೆಗೆ ನಾಲ್ಕು ದಿನಗಳ ಕಾರ್ಯಕ್ರಮಗಳು ನಿದಿಯಂತೆ ನಡೆಯಲಿವೆ ಎಂದು ವಿವರ ನೀಡಿದರು.