ಶಿಕ್ಷಣ ಉಳಿಸಿ ಸಮಿತಿಯ ರಾಜ್ಯ ಘಟಕದ ಆಧ್ಯಕ್ಷ ಅಲ್ಲಮಪ್ರಭು ಬೆಟ್ಟದೂರು, ‘ಶಿಕ್ಷಕನ ಹೊಟ್ಟೆ ತುಂಬಿಸದೆ, ಮಕ್ಕಳ ನೆತ್ತಿಯನ್ನು ತುಂಬಿ ಎಂದು ಹೇಳುವ ಸರ್ಕಾರದ ಕ್ರಮ ಅಮಾನವೀಯ. ಸರ್ಕಾರ ಖಾಸಗೀಕರಣ ನೀತಿಗಳನ್ನು ಕೈಬಿಟ್ಟು, ರಾಷ್ಟ್ರೀಕರಣ ಮಾಡಲು ಮುಂದಾಗಬೇಕಿದೆ. ಈಗಿರುವ ಅತಿಥಿ ಶಿಕ್ಷಕರನ್ನು ಕಾಯಂಗೊಳಿಸಬೇಕು’ ಎಂದರು.