ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರ ಪಾಲಿಕೆಯಲ್ಲೂ ಶೀಘ್ರ ಸಕಾಲ ಯೋಜನೆ ಜಾರಿ

ಉಪ ಮೇಯರ್ ಚನ್ನಬಸಪ್ಪ, ಆಯುಕ್ತ ಚಿದಾನಂದ ವಟಾರೆ ಭರವಸೆ
Last Updated 4 ನವೆಂಬರ್ 2019, 15:15 IST
ಅಕ್ಷರ ಗಾತ್ರ

ಶಿವಮೊಗ್ಗ: ಕಡತಗಳ ವಿಲೇವಾರಿ ವಿಳಂಬ ತಪ್ಪಿಸಲು ಪಾಲಿಕೆಯ ಎಲ್ಲ ವಿಭಾಗಗಳಿಗೂ 10 ದಿನಗಳ ಒಳಗೆ ಸಕಾಲ ಯೋಜನೆಜಾರಿಗೊಳಿಸಲಾಗುವುದುಎಂದು ಉಪ ಮೇಯರ್ ಎಸ್‌.ಎನ್‌.ಚನ್ನಬಸಪ್ಪ, ಆಯುಕ್ತ ಚಿದಾನಂದ ವಟಾರೆ ಘೋಷಿಸಿದರು.

ನಗರ ಪಾಲಿಕೆ ಸಭಾಂಗಣದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

ಸಭೆಯ ಆರಂಭದಲ್ಲಿ ಮಾತನಾಡಿದ ಪಾಲಿಕೆ ವಿರೋಧ ಪ‍ಕ್ಷದ ನಾಯಕ ರಮೇಶ್ ಹೆಗ್ಡೆ, ಕಟ್ಟಡ ಪರವಾನಗಿ,ಪೌತಿಖಾತೆ, ತೆರಿಗೆ ನಿರ್ಧರಣೆ ಸೇರಿದಂತೆ ಎಲ್ಲ ಕಡತಗಳೂ ಸರಿಯಾದ ಸಮಯಕ್ಕೆ ವಿಲೇವಾರಿ ಆಗುತ್ತಿಲ್ಲ. 3,255 ಕಡತಗಳು ಇತ್ಯರ್ಥವಾಗದೇ ಬಾಕಿ ಉಳಿದಿವೆ.ಸಾರ್ವಜನಿಕರು ಪಾಲಿಕೆಗೆ ನಿತ್ಯ ಅಲೆದಾಡುತ್ತಿದ್ದಾರೆ ಎಂದು ದೂರಿದರು.

ಘನತ್ಯಾಜ್ಯ ನಿರ್ವಹಣೆಗೆ ₨ 22.22 ಕೋಟಿ ಅನುದಾನ ಬಿಡುಗಡೆಯಾಗಿದ್ದರೂ ಒಂದೂ ಪರಿಕರ ಖರೀದಿಸಿಲ್ಲ. 1.68 ಲಕ್ಷ ಮನೆಗಳಿಗೆ ಕಸ ವಿಂಗಡಣಾ ಡಬ್ಬಿಗಳನ್ನು ನೀಡಲು ಸಾಧ್ಯವಾಗಿಲ್ಲ. ಸುಗಮ ಆಡಳಿತ ನಿರ್ವಹಣೆಯಲ್ಲಿ ಪಾಲಿಕೆ ಸಂಪೂರ್ಣ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ರಮೇಶ್ ಹೆಗ್ಡೆ ಹೇಳಿಕೆಗೆಬಹುತೇಕಸದಸ್ಯರು ದ್ವನಿಗೂಡಿಸಿದರು.

ಸಕಾಲಯೋಜನೆ ಜಾರಿಗೆಕೆಲವು ತಾಂತ್ರಿಕ ಸಮಸ್ಯೆಗಳಿವೆ. ವಾರದ ಒಳಗೆ ಎಲ್ಲ ಸಮಸ್ಯೆ ನಿವಾರಿಸಲಾಗುವುದು.ಕಾಲ ಮಿತಿಯ ಒಳಗೆ ಸಲ್ಲಿಕೆಯಾದ ಅರ್ಜಿಗಳ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಉಪ ಮೇಯರ್ ಭರವಸೆ ನೀಡಿದರು.

ಸದಸ್ಯ ನಾಗರಾಜ ಕಂಕಾರಿ ಮಾತನಾಡಿ, ಪಾಲಿಕೆ ಆಯುಕ್ತರು ನಗರಕ್ಕೆ ಬಂದುಒಂದುತಿಂಗಳಾಗಿದೆ. ಈಗ ಪ್ರವಾಹ ಪರಿಸ್ಥಿತಿ ನಿಭಾಯಿಸುವ ಸವಾಲು ಅವರ ಮುಂದಿಲ್ಲ. ಆದರೂ ಒಂದೂ ಅರ್ಜಿ ವಿಲೇವಾರಿ ಮಾಡಿಲ್ಲ. ಕೆಲವು ಅಧಿಕಾರಿಗಳು ಕಚೇರಿ ಅವಧಿ ಬಿಟ್ಟು ಸಂಜೆ ಪಾಲಿಕೆಗೆ ಬಂದು ಕೂರುತ್ತಾರೆ. ಅವರಿಗೆ ನಿರ್ದಿಷ್ಟ ಸಮಯ ನಿಗದಿ ಮಾಡಬೇಕು. ಬಯೊಮೆಟ್ರಿಕ್‌ ಇದ್ದರೂ ಬಳಸದ ಅಧಿಕಾರಿಗಳು, ಸಿಬ್ಬಂದಿವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿ ತಿಂಗಳು ಪಾಲಿಕೆ ಸಭೆ ನಡೆಸಬೇಕು. ಪಾಲಿಕೆಯಲ್ಲಿನಗರ ಯೋಜನಾಅಧಿಕಾರಿ ಇಲ್ಲದೆ ಕಟ್ಟಡ ನಿರ್ಮಾಣ ಪರವಾನಗಿ ಪಡೆಯಲು ಸಾರ್ವಜನಿಕರಿಗೆ ಕಷ್ಟವಾಗಿದೆ. ಅಗತ್ಯ ವಾಹನಗಳನ್ನು ಖರೀದಿಸದ ಪರಿಣಾಮ ನಿತ್ಯವೂ ಬೀಳುವ 168 ಟನ್‌ ಕಸ ವಿಲೇವಾರಿಗೆ ತೊಡಕಾಗಿದೆ. ನಗರದ ರಸ್ತೆಗಳು ಹಾಳಾಗಿವೆ. ಗುಂಡಿಗಳಲ್ಲಿಸ ಸಂಚರಿಸುವುದೇ ದುಸ್ತರವಾಗಿದೆ.ಬೀಡಾಡಿ ದಿನಗಳ ಹಾವಳಿ ಹೆಚ್ಚಾಗಿದೆ. ಕುಡಿಯುವ ನೀರಿನ ಸಮಸ್ಯೆಬಗೆಹರಿದಿಲ್ಲ ಎಂದು ಸದಸ್ಯರು ದೂರಿದರು.

ಪಾಲಿಕೆಯ ಎಲ್ಲ ಅಧಿಕಾರಿಗಳುಸಿಬ್ಬಂದಿ ಎರಡು ತಿಂಗಳು ನೆರೆಪರಿಹಾರ ಕಾರ್ಯಕ್ಕೆ ಕೈಜೋಡಿಸಿದ್ದರು. ಹಾಗಾಗಿ, ಇತರೆ ಕೆಲಸ ಕಾರ್ಯಗಳು ವಿಳಂಬವಾಗಿವೆ. ಪಾಲಿಕೆಆಡಳಿತ ನಿಷ್ಕ್ರಿಯವಾಗಿಲ್ಲ. ಸಿಬ್ಬಂದಿ ಕೊರತೆ ಮತ್ತೊಂದು ಕಾರಣ ಎಂದು ಉಪ ಮೇಯರ್ ಸಮಜಾಯಿಷಿ ನೀಡಿದರು.

ಪ್ರವಾಹ ನಿರ್ವಹಣೆಗೆ ₨ 25 ಕೋಟಿ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದರು. ಇದುವರೆಗೂ ಪೈಸೆ ಬಿಡುಗಡೆಯಾಗಿಲ್ಲ. ಬಿದ್ದ ಮನೆಗಳ ದುರಸ್ತಿಗೆ ಹಣ ನೀಡಿಲ್ಲ. ಮನೆ ಕಳೆದುಕೊಂಡವರಿಗೆ ಬಾಡಿಗೆ ಪರಿಹಾರ ₨ 5 ಸಾವಿರ ಕೊಟ್ಟಿಲ್ಲ ಎಂದು ರಮೇಶ್ ಹೆಗ್ಡೆ

ಮೇಯರ್ ಲತಾ ಗಣೇಶ್ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT