ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ಕನಕದಾಸರ ಕೃತಿಗಳ ಬಿಡುಗಡೆ, ಗಾಯನ ವ್ಯಾಖ್ಯಾನ

Last Updated 8 ಜನವರಿ 2020, 14:03 IST
ಅಕ್ಷರ ಗಾತ್ರ

ಶಿವಮೊಗ್ಗ: ಶ್ರೀಗಂಧ ಸಂಸ್ಥೆ ಕುವೆಂಪು ರಂಗಮಂದಿರದಲ್ಲಿ ಜ.10ರಂದು ಸಂಜೆ 6ಕ್ಕೆಕೇಶವ ಸಂಪದ ಕನಕದಾಸರ ಕೃತಿಗಳ ಬಿಡುಗಡೆ ಹಾಗೂ ಗಾಯನ ವ್ಯಾಖ್ಯಾನ ಕಾರ್ಯಕ್ರಮ ಆಯೋಜಿಸಿದೆ.

ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಕನಕದಾಸರ ಆಧ್ಯಾತ್ಮ ಗಂಗೆಯಾದ ಶ್ರೀಹರಿ ಭಕ್ತೆ ಶಾರದಾ ವ್ಯಾಖ್ಯಾನವನ್ನು ಒಂದೇ ಸಂಪುಟದಲ್ಲಿ ಮತ್ತೆ ಪ್ರಕಟಿಸಿದೆ.ಅದು ಸಾವಿರ ಪುಟಗಳ ಮುದ್ರಿತ ಗ್ರಂಥ. ಈ ಗ್ರಂಥ ಮತ್ತು ಕನಕದಾಸರ ಚಿಂತನೆಯ ಹೊನಲು ಎಂಬ ಕೃತಿ ಹಾಗೂ ಕನಕದಾಸರ ಶೃಂಗಾರ ಕಾವ್ಯ ಮೋಹನ ತರಂಗಿಣಿ (ವ್ಯಾಖ್ಯಾನ-ವಿಶ್ಲೇಷಣೆ) ಮೂರನೇ ಸಂಪುಟ ಪುಸ್ತಕಗಳು ಅಂದು ಬಿಡುಗಡೆಯಾಗಲಿವೆ ಎಂದು ಸಂಸ್ಥೆಯ ಸಂಚಾಲಕ ಬಿ.ಆರ್.ಮಧುಸೂದನ್ಬುಧವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.

ಕಾಗಿನೆಲೆ ನಿರಂಜನಾನಂದಪುರಿ ಸ್ವಾಮೀಜಿ ಪುಸ್ತಕ ಬಿಡುಗಡೆ ಮಾಡುವರು. ಕೃತಿರಚನೆಕಾರ ಎಂ.ಆರ್.ಸತ್ಯನಾರಾಯಣ್ ಉಪಸ್ಥಿತರಿರುವರು. ಶ್ರೀಗಂಧ ಸಂಸ್ಥೆ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಅಧ್ಯಕ್ಷತೆ ವಹಿಸುವರು. ಹುಬ್ಬಳ್ಳಿಯ ಕಿರಣ್ ರಾಮ್‌ ಕನಕದಾಸರ ಗೀತೆಗಳ ವಿಶೇಷ ಗಾಯನ ವ್ಯಾಖ್ಯಾನಿಸುವರು. ಗಾಯಕರಾದ ಜಿ.ಪಾರ್ಥ ಚಿರಂತನ, ಜಿ.ಪೃಥ್ವಿಗೌಡ, ಧನ್ಯಶ್ರೀ ಅಡಿಗ, ಸಂಜನಾ ಗಾಯನ ನೀಡುವರು. ಚಿಂತಕ ವಿನಯ್ ಅವರ ಪರಿಕಲ್ಪನೆಯೊಂದಿಗೆ ಈ ಕಾರ್ಯಕ್ರಮ ಮೂಡಿಬರಲಿದೆ ಎಂದು ವಿವರ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ, ಪ್ರಮುಖರಾದ ಚೇತನ್, ಸಹನಾ ಚೇತನ್, ಕೃಷ್ಣಾನಂದ, ಆ.ಚಿ.ಪ್ರಕಾಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT