ಕಾಗಿನೆಲೆ ನಿರಂಜನಾನಂದಪುರಿ ಸ್ವಾಮೀಜಿ ಪುಸ್ತಕ ಬಿಡುಗಡೆ ಮಾಡುವರು. ಕೃತಿರಚನೆಕಾರ ಎಂ.ಆರ್.ಸತ್ಯನಾರಾಯಣ್ ಉಪಸ್ಥಿತರಿರುವರು. ಶ್ರೀಗಂಧ ಸಂಸ್ಥೆ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಅಧ್ಯಕ್ಷತೆ ವಹಿಸುವರು. ಹುಬ್ಬಳ್ಳಿಯ ಕಿರಣ್ ರಾಮ್ ಕನಕದಾಸರ ಗೀತೆಗಳ ವಿಶೇಷ ಗಾಯನ ವ್ಯಾಖ್ಯಾನಿಸುವರು. ಗಾಯಕರಾದ ಜಿ.ಪಾರ್ಥ ಚಿರಂತನ, ಜಿ.ಪೃಥ್ವಿಗೌಡ, ಧನ್ಯಶ್ರೀ ಅಡಿಗ, ಸಂಜನಾ ಗಾಯನ ನೀಡುವರು. ಚಿಂತಕ ವಿನಯ್ ಅವರ ಪರಿಕಲ್ಪನೆಯೊಂದಿಗೆ ಈ ಕಾರ್ಯಕ್ರಮ ಮೂಡಿಬರಲಿದೆ ಎಂದು ವಿವರ ನೀಡಿದರು.