ಶಿವಮೊಗ್ಗ ನಗರದಿಂದ ಚನ್ನಗಿರಿ, ಶಿಕಾರಿಪುರ, ತೀರ್ಥಹಳ್ಳಿ, ಹೊಸನಗರ, ಸಾಗರ ಮಾರ್ಗಗಳಲ್ಲಿ ಮೊದಲಿನಿಂದಲೂ ಖಾಸಗಿ ಬಸ್ಗಳೇ ಅಧಿಕ ಸಂಖ್ಯೆಯಲ್ಲಿ ಚಲಿಸುತ್ತಿವೆ. ಆ ಮಾರ್ಗಗಳ ಜನರಿಗೆ ಹೆಚ್ಚು ಅನನುಕೂಲವಾಗಿಲ್ಲ. ಹೊನ್ನಾಳಿ, ಭದ್ರಾವತಿ ಮಾರ್ಗ ಹಾಗೂ ಮೈಸೂರು, ಬೆಂಗಳೂರು, ಉತ್ತರ ಕರ್ನಾಟಕದ ಭಾಗಗಳಿಗೆ ತೆರಳುವ ಪ್ರಯಾಣಿಕರಿಗೆ ಹೆಚ್ಚಿನ ತೊಂದರೆಯಾಗಿದೆ.