ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಟ್ಟೆಕೆರೆ ಬಗರ್‌ಹುಕುಂ ವಿವಾದ: ಅಕ್ರಮ ಖಾತೆಗೆ ತಡೆ

Last Updated 9 ಜೂನ್ 2020, 9:27 IST
ಅಕ್ಷರ ಗಾತ್ರ

ಶಿವಮೊಗ್ಗ: ತಾಲ್ಲೂಕಿನ ಹೊಸಳ್ಳಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಹೊಸಕೊಪ್ಪ ತಟ್ಟೆಕೆರೆ ಗ್ರಾಮದ ಬಗರ್‌ಹುಕುಂ ಸಾಗುವಳಿ ಭೂಮಿಯನ್ನು ಖಾಸಗಿ ಭೂ ಮಾಲೀಕರಿಗೆ ಅಕ್ರಮ ಖಾತೆ ಮಾಡಿರುವ ಆದೇಶಕ್ಕೆ ಉಪ ವಿಭಾಗಾಧಿಕಾರಿ ಟಿ.ವಿ.ಪ್ರಕಾಶ್ತಡೆ ನೀಡಿದ್ದಾರೆ.

ತಟ್ಟೆಕೆರೆ ಗ್ರಾಮದ ಸರ್ವೆನಂ 176ರಲ್ಲಿರುವ 40.19 ಎಕರೆ ಭೂಮಿಯನ್ನು25ಕ್ಕೂ ಹೆಚ್ಚು ದಲಿತ ಕುಟುಂಬಗಳುಕಳೆದ 70 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಿದ್ದರು.ಭೂ ಮಂಜೂರಾತಿಗಾಗಿ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ 50, 53ರಲ್ಲಿ ಅರ್ಜಿ ಸಲ್ಲಿಸಿದ್ದಾರೆ.ಉಪ ವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದೆ. ಇಂತಹ ಸಮಯದಲ್ಲೇಖಾಸಗಿ ವ್ಯಕ್ತಿಗಳಿಗೆ ಲಾಕ್‌ಡೌನ್ಸಮಯದಲ್ಲಿ32.15 ಎಕರೆ ಭೂಮಿ ಖಾತೆ ಮಾಡಲಾಗಿತ್ತು. ಅಕ್ರಮ ದಾಖಲೆಗಳ ಮೂಲಕ ಬಗರ್‌ಹುಕುಂ ಭೂಮಿ ಕಬಳಿಸಿದ ವ್ಯಕ್ತಿಗಳು ಸಾಗುವಳಿದಾರರನ್ನು ಒಕ್ಕೆಲೆಬ್ಬಿಸುವ ಪ್ರಯತ್ನ ನಡೆಸಿದ್ದರು.ಇದನ್ನು ಖಂಡಿಸಿ ಸಾಗುವಳಿದಾರರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.

ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಉಪ ವಿಭಾಗಾಧಿಕಾರಿಗಳು ಸರ್ವೆ ನಂಬರ್ 176ರಲ್ಲಿನ ಭೂಮಿಯ ಖಾತೆ ತಡೆಹಿಡಿದು ಆದೇಶ ಹೊರಡಿಸಿದ್ದಾರೆ. ಬಗರ್ ಹುಕುಂ ಅರ್ಜಿಗಳುವಿಚಾರಣೆ ನ್ಯಾಯಾಲಯದಲ್ಲಿವೆ. ಅಂತಿಮ ತೀರ್ಪುಬರುವವರೆಗೂ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದುಸೂಚಿಸಿದ್ದಾರೆ.

ಶಾಸಕರ ಭೇಟಿ: ಶಿವಮೊಗ್ಗ ತಾಲ್ಲೂಕಿನ ತಟ್ಟೆಕೆರೆ ಗ್ರಾಮ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿದೆ. ಶಾಸಕರಾದ ಆರಗ ಜ್ಞಾನೇಂದ್ರ ಗ್ರಾಮಕ್ಕೆ ಭೇಟಿ ನೀಡಿ ಸಾಗುವಳಿಭೂಮಿ ಪರಿಶೀಲಿಸಿದರು. ಸಾಗುವಳಿದಾರರ ಅಹವಾಲು ಆಲಿಸಿದರು. ಅಕ್ರಮಖಾತೆ ಮಾಡಿದವರನ್ನುಜೈಲಿಗೆ ಕಳುಹಿಸಲಾಗುವುದು ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT