ತಟ್ಟೆಕೆರೆ ಗ್ರಾಮದ ಸರ್ವೆನಂ 176ರಲ್ಲಿರುವ 40.19 ಎಕರೆ ಭೂಮಿಯನ್ನು25ಕ್ಕೂ ಹೆಚ್ಚು ದಲಿತ ಕುಟುಂಬಗಳುಕಳೆದ 70 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಿದ್ದರು.ಭೂ ಮಂಜೂರಾತಿಗಾಗಿ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ 50, 53ರಲ್ಲಿ ಅರ್ಜಿ ಸಲ್ಲಿಸಿದ್ದಾರೆ.ಉಪ ವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದೆ. ಇಂತಹ ಸಮಯದಲ್ಲೇಖಾಸಗಿ ವ್ಯಕ್ತಿಗಳಿಗೆ ಲಾಕ್ಡೌನ್ಸಮಯದಲ್ಲಿ32.15 ಎಕರೆ ಭೂಮಿ ಖಾತೆ ಮಾಡಲಾಗಿತ್ತು. ಅಕ್ರಮ ದಾಖಲೆಗಳ ಮೂಲಕ ಬಗರ್ಹುಕುಂ ಭೂಮಿ ಕಬಳಿಸಿದ ವ್ಯಕ್ತಿಗಳು ಸಾಗುವಳಿದಾರರನ್ನು ಒಕ್ಕೆಲೆಬ್ಬಿಸುವ ಪ್ರಯತ್ನ ನಡೆಸಿದ್ದರು.ಇದನ್ನು ಖಂಡಿಸಿ ಸಾಗುವಳಿದಾರರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.