<p>ಆನವಟ್ಟಿ: ‘ಮನುಷ್ಯನ ಬಹುಮುಖ್ಯ ಅಂಗವಾದ ಕಣ್ಣಿನ ಚಿಕಿತ್ಸೆಗೆ ಹಲವೆಡೆ ಕೇಂದ್ರಗಳನ್ನು ತೆರೆದು ಉತ್ತಮ ಹೆಸರು ಮಾಡಿರುವ ಸಂಸ್ಥೆ ಇಲ್ಲಿ ನೂತನ ಕೇಂದ್ರ ತೆರೆದಿದೆ. ಇದರ ಪ್ರಯೋಜನವನ್ನು ನಾಗರಿಕರು ಪಡೆದುಕೊಳ್ಳಿ’ ಎಂದು ಜಡೆ ಸಂಸ್ಥಾನ ಮಠದ ಮಹಾಂತ ಸ್ವಾಮೀಜಿ ತಿಳಿಸಿದರು.</p>.<p>ಬುಧವಾರ ಆನವಟ್ಟಿ ಡಿಸಿಸಿ ಬ್ಯಾಂಕ್ ಮುಂಭಾಗದಲ್ಲಿ ಡಾ.ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಹಾಗೂ ಎಸ್ಜಿಎಂ ಟ್ರಸ್ಟ್ನಿಂದ 24ನೇ ದೃಷ್ಟಿ ಕೇಂದ್ರ ಆರಂಭ ಹಾಗೂ ಉಚಿತ ನೇತ್ರ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.</p>.<p>ಬಂಕಸಾಣದ ಸಮಾಧಾನ ಮಠದ ಘನಬಸವ ಅಮರೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.</p>.<p>ಶಿಬಿರದಲ್ಲಿ ನೂರಾರು ಜನರ ನೇತ್ರ ತಪಾಸಣೆ ಮಾಡಲಾಯಿತು. ಅಗತ್ಯವಿರುವವರನ್ನು ಉಚಿತ ಶಸ್ತ್ರ ಚಿಕಿತ್ಸೆಗೆ ಆಯ್ಕೆ ಮಾಡಿಕೊಳ್ಳಲಾಯಿತು.</p>.<p>ರಾಜ್ಯ ನೇತ್ರತಜ್ಞ ಸಂಘದ ಅಧ್ಯಕ್ಷ ಡಾ.ಕೆ.ವಿ ಶಿವರಾಮ (ಶಿರಸಿ), ಗ್ಲಾಕೋಮಾ ತಜ್ಞೆ ಡಾ.ತನುಶ್ರೀ ಹೆಗಡೆ, ಕೇಂದ್ರ ಕಾರ್ಯ ನಿರ್ವಾಹಕ ಕುತುಬುದ್ದೀನ್ ಮುಲ್ಲಾ ಉಪನ್ಯಾಸ ನೀಡಿ, ಅಂಧತ್ವ ನಿವಾರಣೆ ಮಾಡುವುದಕ್ಕಾಗಿ ಈಗ ಆರಂಭವಾಗಿರುವ ದೃಷ್ಟಿಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಿ ಎಂದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260416-42-1909420387</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಆನವಟ್ಟಿ: ‘ಮನುಷ್ಯನ ಬಹುಮುಖ್ಯ ಅಂಗವಾದ ಕಣ್ಣಿನ ಚಿಕಿತ್ಸೆಗೆ ಹಲವೆಡೆ ಕೇಂದ್ರಗಳನ್ನು ತೆರೆದು ಉತ್ತಮ ಹೆಸರು ಮಾಡಿರುವ ಸಂಸ್ಥೆ ಇಲ್ಲಿ ನೂತನ ಕೇಂದ್ರ ತೆರೆದಿದೆ. ಇದರ ಪ್ರಯೋಜನವನ್ನು ನಾಗರಿಕರು ಪಡೆದುಕೊಳ್ಳಿ’ ಎಂದು ಜಡೆ ಸಂಸ್ಥಾನ ಮಠದ ಮಹಾಂತ ಸ್ವಾಮೀಜಿ ತಿಳಿಸಿದರು.</p>.<p>ಬುಧವಾರ ಆನವಟ್ಟಿ ಡಿಸಿಸಿ ಬ್ಯಾಂಕ್ ಮುಂಭಾಗದಲ್ಲಿ ಡಾ.ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಹಾಗೂ ಎಸ್ಜಿಎಂ ಟ್ರಸ್ಟ್ನಿಂದ 24ನೇ ದೃಷ್ಟಿ ಕೇಂದ್ರ ಆರಂಭ ಹಾಗೂ ಉಚಿತ ನೇತ್ರ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.</p>.<p>ಬಂಕಸಾಣದ ಸಮಾಧಾನ ಮಠದ ಘನಬಸವ ಅಮರೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.</p>.<p>ಶಿಬಿರದಲ್ಲಿ ನೂರಾರು ಜನರ ನೇತ್ರ ತಪಾಸಣೆ ಮಾಡಲಾಯಿತು. ಅಗತ್ಯವಿರುವವರನ್ನು ಉಚಿತ ಶಸ್ತ್ರ ಚಿಕಿತ್ಸೆಗೆ ಆಯ್ಕೆ ಮಾಡಿಕೊಳ್ಳಲಾಯಿತು.</p>.<p>ರಾಜ್ಯ ನೇತ್ರತಜ್ಞ ಸಂಘದ ಅಧ್ಯಕ್ಷ ಡಾ.ಕೆ.ವಿ ಶಿವರಾಮ (ಶಿರಸಿ), ಗ್ಲಾಕೋಮಾ ತಜ್ಞೆ ಡಾ.ತನುಶ್ರೀ ಹೆಗಡೆ, ಕೇಂದ್ರ ಕಾರ್ಯ ನಿರ್ವಾಹಕ ಕುತುಬುದ್ದೀನ್ ಮುಲ್ಲಾ ಉಪನ್ಯಾಸ ನೀಡಿ, ಅಂಧತ್ವ ನಿವಾರಣೆ ಮಾಡುವುದಕ್ಕಾಗಿ ಈಗ ಆರಂಭವಾಗಿರುವ ದೃಷ್ಟಿಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಿ ಎಂದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260416-42-1909420387</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>