ಅಹಿತಕರ ಘಟನೆಗಳ ನಂತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೂರು ದಿನಗಳು ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಆದರೆ, ಪೊಲೀಸರು ಶುಕ್ರವಾರ ಬೆಳಿಗ್ಗೆ ನಗರವನ್ನು ಸಂಪೂರ್ಣ ಬಂದ್ ಮಾಡಿಸಿದರು. ವಾಣಿಜ್ಯ ಮಳಿಗೆಗಳ ಜತೆ, ಹೋಟೆಲ್ಗಳು, ತರಕಾರಿ ಮಾರುಕಟ್ಟೆ, ಪೆಟ್ರೋಲ್ ಬಂಕ್ಗಳನ್ನೂ ಮುಚ್ಚಿಸಿದರು. ಹಾಲು, ತರಕಾರಿ ಖರೀದಿಸಲೂ ನಾಗರಿಕರು ಪರದಾಡಿದರು. ಹೂ, ಹಣ್ಣುಗಳ ಮಾರಾಟಕ್ಕೂ ಅವಕಾಶ ನೀಡಲಿಲ್ಲ. ಆಸ್ಪತ್ರೆಗಳ ಬಳಿ ರೋಗಿಗಳು, ಅವರ ಬಂಧುಗಳು ಊಟ, ತಿಂಡಿಗೂ ಪರದಾಡಿದರು.