ಪ್ರಶಸ್ತಿ ಸ್ವೀಕರಿಸಿದ ಡಾ.ನಾ.ಮೊಗಸಾಲೆ, ‘ಸರ್ಕಾರಕ್ಕೆ ಒಂದು ಸ್ಪಷ್ಟವಾದ ಸಾಂಸ್ಕೃತಿಕ ನೀತಿ ಇರಬೇಕು. ಅದು ಎಡ ಬಲಗಳ ನೆರಳಿನಿಂದ ಹೊರಬರಬೇಕು. ಭಾಷೆ, ಧ್ವನಿ, ಲಯ, ಸಂಕೇತ, ಪ್ರತಿಮೆಗಳ ಮೂಲಕ ಅರಿವನ್ನು ಹೆಚ್ಚಿಸಿ ಹೊಸ ‘ದರ್ಶನ’ಕ್ಕೆ ದಾರಿ ಮಾಡಿಕೊಟ್ಟ ಅಪರೂಪದ ಕವಿ ಶಿಶುನಾಳ ಶರೀಫರ ಹೆಸರಿನಲ್ಲಿ ಪ್ರಶಸ್ತಿ ಪಡೆಯುತ್ತಿರುವುದು ಧನ್ಯತೆಯ ಭಾವ ಮೂಡಿಸಿದೆ’ ಎಂದು ಹೇಳಿದರು.