ಹಿಂದೆ ಜಿಲ್ಲಾಧಿಕಾರಿ ಕಚೇರಿಯಿಂದ ಬೇಸೂರು ಗ್ರಾಮದಲ್ಲಿನ ಭೂ–ಪ್ರದೇಶದ ಮಾಹಿತಿ ಕೇಳಲಾಗಿತ್ತು. ಮಾಹಿತಿ ಒದಗಿಸಿದ್ದು ನಂತರ ಅಣುಸ್ಥಾವರ ಸ್ಥಾಪನೆಗೆ ಕುರಿತು ಯಾವುದೇ ಬೆಳವಣಿಗೆಯಾಗಿಲ್ಲ. ಆತಂಕಪಡುವ ಅಗತ್ಯವಿಲ್ಲ
ವೀರೇಶ್ ಕುಮಾರ್ ಉಪವಿಭಾಗಾಧಿಕಾರಿ ಸಾಗರ
ಶರಾವತಿ ಹಿನ್ನೀರಿಗೆ ಬೇಸೂರು ಸಮೀಪವಿದೆ. ಪರಿಸರ ಸೂಕ್ಷ್ಮ ಪ್ರದೇಶವಾಗಿದೆ. ಇಲ್ಲಿ ಅಣುವಿದ್ಯುತ್ ಸ್ಥಾವರ ಸ್ಥಾಪನೆಗೆ ಅವಕಾಶ ನೀಡುವುದಿಲ್ಲ. ಕೈಗಾ ಅಣು ಸ್ಥಾವರದಿಂದ ಆಗಿರುವ ಅನಾಹುತಗಳು ಕಣ್ಣ ಮುಂದಿವೆ
ಗೋಪಾಲಕೃಷ್ಣ ಬೇಳೂರು ಸಾಗರ ಶಾಸಕ
ಮಲೆನಾಡಿನ ಜನರು ಜಲವಿದ್ಯುತ್ ಯೋಜನೆಗಾಗಿ ಎರಡು ಬಾರಿ ಮುಳುಗಡೆ ಸಂತ್ರಸ್ತರಾಗಿದ್ದಾರೆ. ಮತ್ತೆ ಸಂತ್ರಸ್ತರಾಗಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಅವಕಾಶ ಮಾಡಿಕೊಡಬಾರದು