<p><strong>ಶಿವಮೊಗ್ಗ:</strong> ಇಲ್ಲಿನ ಮಲವಗೊಪ್ಪದ ಭದ್ರಾ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕೇಂದ್ರ ಕಚೇರಿಯ ಆವರಣದಲ್ಲಿ ಸಹಕಾರ ಸಂಘಗಳ ಪದಾಧಿಕಾರಿಗಳು, ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ರೈತರಿಗೆ ಶುಕ್ರವಾರ ಒಂದು ದಿನದ ತರಬೇತಿ ಕಾರ್ಯಾಗಾರ ಏರ್ಪಡಿಸಲಾಗಿತ್ತು.</p>.<p>‘ನೀರು ಬಳಕೆದಾರರ ಸಹಕಾರ ಸಂಘಗಳು ರೈತ ಉತ್ಪಾದಕ ಸಂಸ್ಥೆಗಳಾಗಿ (ಎಫ್ಪಿಒ) ಬೆಳೆಯಬೇಕು’ ಎಂದು ಮುಖ್ಯ ಅತಿಥಿಯಾಗಿದ್ದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಕೆ.ಶಶಿಧರ್ ತಿಳಿಸಿದರು.</p>.<p>‘ಸಹಕಾರ ರಂಗವು ತುಂಬಾ ವಿಶಾಲವಾಗಿದೆ. ಹೀಗಾಗಿ ನೀರು ಬಳಕೆದಾರರ ಸಂಘದವರು ವಿವಿಧ ಉದ್ದೇಶಗಳನ್ನು ಸಾಧಿಸುವ ಸಂಘಗಳಾಗಿ ಬೆಳೆಯಬೇಕು’ ಎಂದು ಭದ್ರಾ ಕಾಡಾ ಅಧ್ಯಕ್ಷ ಕೆ.ಪಿ.ಅಂಶುಮಂತ್ ಸಲಹೆ ನೀಡಿದರು.</p>.<p>ಇದೇ ವೇಳೆ ದಾವಣಗೆರೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಮತ್ತು ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಒಟ್ಟು 80 ನೀರು ಬಳಕೆದಾರ ಸಹಕಾರ ಸಂಘಗಳಿಗೆ ತಲಾ ₹ 1 ಲಕ್ಷ ವಾರ್ಷಿಕ ಕಾರ್ಯಾನುದಾನದ ಚೆಕ್ ವಿತರಿಸಲಾಯಿತು. ಕೃಷಿ ಮತ್ತು ಸಹಕಾರ ವಿಭಾಗದಿಂದ ನೀಡಿದ ಹೋಲ್ ಡಿಗ್ಗರ್ ಮತ್ತು ವೀಡ್ ಕಟ್ಟರ್ ಯಂತ್ರಗಳನ್ನು 70ಕ್ಕೂ ಹೆಚ್ಚು ಸಂಘಗಳಿಗೆ ವಿತರಿಸಲಾಯಿತು.</p>.<p>ಭದ್ರಾ ಕಾಡಾ ಆಡಳಿತಾಧಿಕಾರಿ ಆರ್.ಸತೀಶ್, ಸಹಾಯಕ ಎಂಜಿನಿಯರ್ ರವೀಂದ್ರ, ಸಹಕಾರ ಸಂಘಗಳ ಜಂಟಿ ನಿಬಂಧಕ ನಾಗೇಶ್ ಎಸ್. ಡೋಂಗರೆ, ಸಹಾಯಕ ನಿಬಂಧಕ ಮಂಜುನಾಥ ಮತ್ತು ತಾಂತ್ರಿಕ ವಿಭಾಗದ ಭೂ ಅಭಿವೃದ್ಧಿ ಅಧಿಕಾರಿ ಕೆ.ಪ್ರಶಾಂತ್, ಸಹಾಯಕ ನಿರ್ದೇಶಕ ವೈ.ನಾಗೇಂದ್ರ ರಾವ್ ಪಾಲ್ಗೊಂಡಿದ್ದರು.<br /><br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ:</strong> ಇಲ್ಲಿನ ಮಲವಗೊಪ್ಪದ ಭದ್ರಾ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕೇಂದ್ರ ಕಚೇರಿಯ ಆವರಣದಲ್ಲಿ ಸಹಕಾರ ಸಂಘಗಳ ಪದಾಧಿಕಾರಿಗಳು, ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ರೈತರಿಗೆ ಶುಕ್ರವಾರ ಒಂದು ದಿನದ ತರಬೇತಿ ಕಾರ್ಯಾಗಾರ ಏರ್ಪಡಿಸಲಾಗಿತ್ತು.</p>.<p>‘ನೀರು ಬಳಕೆದಾರರ ಸಹಕಾರ ಸಂಘಗಳು ರೈತ ಉತ್ಪಾದಕ ಸಂಸ್ಥೆಗಳಾಗಿ (ಎಫ್ಪಿಒ) ಬೆಳೆಯಬೇಕು’ ಎಂದು ಮುಖ್ಯ ಅತಿಥಿಯಾಗಿದ್ದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಕೆ.ಶಶಿಧರ್ ತಿಳಿಸಿದರು.</p>.<p>‘ಸಹಕಾರ ರಂಗವು ತುಂಬಾ ವಿಶಾಲವಾಗಿದೆ. ಹೀಗಾಗಿ ನೀರು ಬಳಕೆದಾರರ ಸಂಘದವರು ವಿವಿಧ ಉದ್ದೇಶಗಳನ್ನು ಸಾಧಿಸುವ ಸಂಘಗಳಾಗಿ ಬೆಳೆಯಬೇಕು’ ಎಂದು ಭದ್ರಾ ಕಾಡಾ ಅಧ್ಯಕ್ಷ ಕೆ.ಪಿ.ಅಂಶುಮಂತ್ ಸಲಹೆ ನೀಡಿದರು.</p>.<p>ಇದೇ ವೇಳೆ ದಾವಣಗೆರೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಮತ್ತು ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಒಟ್ಟು 80 ನೀರು ಬಳಕೆದಾರ ಸಹಕಾರ ಸಂಘಗಳಿಗೆ ತಲಾ ₹ 1 ಲಕ್ಷ ವಾರ್ಷಿಕ ಕಾರ್ಯಾನುದಾನದ ಚೆಕ್ ವಿತರಿಸಲಾಯಿತು. ಕೃಷಿ ಮತ್ತು ಸಹಕಾರ ವಿಭಾಗದಿಂದ ನೀಡಿದ ಹೋಲ್ ಡಿಗ್ಗರ್ ಮತ್ತು ವೀಡ್ ಕಟ್ಟರ್ ಯಂತ್ರಗಳನ್ನು 70ಕ್ಕೂ ಹೆಚ್ಚು ಸಂಘಗಳಿಗೆ ವಿತರಿಸಲಾಯಿತು.</p>.<p>ಭದ್ರಾ ಕಾಡಾ ಆಡಳಿತಾಧಿಕಾರಿ ಆರ್.ಸತೀಶ್, ಸಹಾಯಕ ಎಂಜಿನಿಯರ್ ರವೀಂದ್ರ, ಸಹಕಾರ ಸಂಘಗಳ ಜಂಟಿ ನಿಬಂಧಕ ನಾಗೇಶ್ ಎಸ್. ಡೋಂಗರೆ, ಸಹಾಯಕ ನಿಬಂಧಕ ಮಂಜುನಾಥ ಮತ್ತು ತಾಂತ್ರಿಕ ವಿಭಾಗದ ಭೂ ಅಭಿವೃದ್ಧಿ ಅಧಿಕಾರಿ ಕೆ.ಪ್ರಶಾಂತ್, ಸಹಾಯಕ ನಿರ್ದೇಶಕ ವೈ.ನಾಗೇಂದ್ರ ರಾವ್ ಪಾಲ್ಗೊಂಡಿದ್ದರು.<br /><br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>