ಭದ್ರಾವತಿ: 9 ವರ್ಷಗಳ ನಂತರ ಮುಕ್ತಾಯ; ₹ 4.57 ಕೋಟಿ ವೆಚ್ಚ
ವೀರೇಂದ್ರ ಪಿ.ಎಂ.
Published : 13 ಏಪ್ರಿಲ್ 2026, 23:36 IST
Last Updated : 13 ಏಪ್ರಿಲ್ 2026, 23:36 IST
ADVERTISEMENT
ಫಾಲೋ ಮಾಡಿ
Comments
ಇಂದು ಉದ್ಘಾಟನೆ
ನೂತನವಾಗಿ ನಿರ್ಮಾಣವಾಗಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಏಪ್ರಿಲ್ 14ರಂದು ಬೆಳಿಗ್ಗೆ 10.30ಕ್ಕೆ ಉದ್ಘಾಟಿಸಲಿದ್ದಾರೆ. ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹಾಗೂ ಶಾಸಕ ಬಿ.ಕೆ. ಸಂಗಮೇಶ್ವರ್ ಕಾರ್ಯಕ್ರಮದಲ್ಲಿ ಭಾಗವಹಿಸುವರು.
‘ವೈಚಾರಿಕ ಕಾರ್ಯಕ್ರಮಗಳಿಗೆ ವೇದಿಕೆಯಾಗಲಿ’
ಕರ್ನಾಟಕದ ದಲಿತ ಚಳವಳಿಗೆ ಭದ್ರಾವತಿಯ ಕೊಡುಗೆ ದೊಡ್ಡದು. ಪ್ರೊ. ಎಂ.ಕೃಷ್ಣಪ್ಪ ಅವರ ನೇತೃತ್ವದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜನ್ಮ ತಳೆದಿದ್ದು ಇಲ್ಲಿಯೇ. ಈ ಹೋರಾಟದ ನೆಲದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಹೆಸರಿನಲ್ಲಿ ಭವನ ನಿರ್ಮಾಣವಾಗಿರುವುದು ಹೆಮ್ಮೆಯ ಸಂಗತಿ. ನೂತನ ಕಟ್ಟಡವನ್ನು ಸಾಮಾಜಿಕ ಅಸಮಾನತೆ ನಿವಾರಿಸುವ ಉದ್ದೇಶವಿರುವ ಸಾಂಸ್ಕೃತಿಕ ಹಾಗೂ ವೈಚಾರಿಕ ಕಾರ್ಯಕ್ರಮಗಳನ್ನು ನಡೆಸಲು ಉಪಯೋಗಿಸಬೇಕು