<p><strong>ಭದ್ರಾವತಿ:</strong> ವಿಪರೀತ ಮಳೆಯಿಂದಾಗಿ ನಗರದ ಹೃದಯಭಾಗ ಸೇರಿದಂತೆ ವಿವಿಧೆಡೆ ಇರುವ ಖಾಲಿ ನಿವೇಶನ ಹಾಗೂ ಪಾರ್ಕ್ಗಳಲ್ಲಿ ಗಿಡ, ಪೊದೆಗಳು ಹೆಚ್ಚಳವಾಗಿವೆ. ಇದರಿಂದ ಹಾವುಗಳ ಕಾಟ ಅಧಿಕವಾಗಿದೆ.</p>.<p>ನಗರದ ಹೊಸಮನೆ, ವಿದ್ಯಾಮಂದಿರ, ಭೋವಿ ಕಾಲೊನಿ, ಕಾಗದ ನಗರ, ಸುಭಾಷ್ ನಗರ, ಭೂತನ ಗುಡಿ, ಸಿ.ಬಿ.ಶೆಡ್, ನ್ಯೂ ಕಾಲೊನಿ ಒಳರಸ್ತೆಗಳಲ್ಲಿ ಹಾವುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿವೆ. ಕನಕ ಮಂಟಪ ಮೈದಾನ ಸೇರಿದಂತೆ ಮಕ್ಕಳು ಆಡುವ ಉದ್ಯಾನಗಳ ಇಕ್ಕೆಲಗಳಲ್ಲಿ ಹಾವುಗಳ ಉಪಟಳ ಹೆಚ್ಚಿವೆ. ಸಂಬಂಧ ಪಟ್ಟ ಮಾಲೀಕರು ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸಬೇಕು ಎಂಬುದು ಸುಭಾಷ್ ನಗರ ನಿವಾಸಿಗಳ ಆಗ್ರಹ.</p>.<p>ತಿಂಗಳ ಹಿಂದೆ ಸುಭಾಷ್ ನಗರದ 11ನೇ ವಾರ್ಡ್ನಲ್ಲಿ 12 ವರ್ಷದ ಬಾಲಕನಿಗೆ ಮನೆಯ ಬಾಗಿಲಿನಲ್ಲಿಯೇ ಕೊಳಕಮಂಡಲ ಹಾವು ಕಚ್ಚಿತ್ತು. ಜೀವನ್ಮರಣದ ಸ್ಥಿತಿಗೆ ತಲುಪಿದ್ದ ಬಾಲಕ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.</p>.<p>‘ಮಳೆಯ ಕಾರಣ ನಗರದಲ್ಲಿ ವಿದ್ಯುತ್ ಸ್ಥಗಿತಗೊಂಡು ಕತ್ತಲು ಆವರಿಸಿತ್ತು. ಮನೆಯೊಳಗೆ ನುಸುಳಲು ಯತ್ನಿಸುತ್ತಿದ್ದ ಹಾವನ್ನು ಪುತ್ರ ತೆಗೆದು ಬಿಸಾಡಿದ್ದಾನೆ. ಆ ಹಾವನ್ನು ಮುಟ್ಟಿದ ಕೈ ಗಳಿಗೂ ಸೋಂಕು ತಗುಲಿದೆ. ಈ ವಾರ್ಡಿನಲ್ಲಿ ಕೊಳಕಮಂಡಲ ಹಾವು ಮತ್ತು ಅದರ ಮರಿಗಳು ಹೆಚ್ಚಾಗಿವೆ. ಚಿಕಿತ್ಸೆ ಕೊಡಿಸಲು ನಗರಸಭೆ, ಜನಪ್ರತಿನಿಧಿಗಳಿಂದ ಯಾವುದೇ ನೆರವು ದೊರೆತಿಲ್ಲ’ ಎಂದು ಬಾಲಕನ ಪೋಷಕರು ಅಳಲು ತೋಡಿಕೊಂಡರು.</p>.<p>‘ನಗರದ ನಿವಾಸಿಗಳು ಮನೆಗಳ ಅಕ್ಕ ಪಕ್ಕದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ವಾರ್ಡ್ಗಳಲ್ಲಿನ ಖಾಲಿ ನಿವೇಶನಗಳಲ್ಲಿ ಬೆಳೆದಿರುವ ಗಿಡ-ಪೊದೆಗಳನ್ನು ತೆರವುಗೊಳಿಸಿ ಸ್ವಚ್ಛತೆಗೆ ಒತ್ತು ನೀಡಬೇಕು ಎಂದು ಪ್ರಕಟಣೆ ಹೊರಡಿಸಲಾಗುವುದು. ಸಂಬಂಧಪಟ್ಟವರಿಗೆ ನೋಟಿಸ್ ಸಹ ನೀಡಲಾಗುವುದು’ ಎಂದು ನಗರಸಭೆ ಪರಿಸರ ಅಧಿಕಾರಿ ಪ್ರಭಾಕರ್ ತಿಳಿಸಿದರು.</p>.<p><strong>11 ತಿಂಗಳಲ್ಲಿ 116 ಪ್ರಕರಣ</strong></p><p> ‘ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲಿ 2024ರ ಜನವರಿಯಿಂದ ನವೆಂಬರ್ವರೆಗೆ ಒಟ್ಟು 116 ಹಾವು ಕಚ್ಚಿದ ಪ್ರಕರಣ ದಾಖಲಾಗಿವೆ. ಎಲ್ಲರೂ ಗುಣಮುಖರಾಗಿದ್ದಾರೆ. ಜಿಲ್ಲಾ ಕೇಂದ್ರಗಳಲ್ಲಿ ಹೆಚ್ಚಿನ ಚಿಕಿತ್ಸಾ ಸೌಲಭ್ಯ ಇರುವುದರಿಂದ ಚಿಕಿತ್ಸೆಗೆ ಅಲ್ಲಿಗೆ ಕಳಿಸಲಾಗುತ್ತದೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಎಂ. ಅಶೋಕ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭದ್ರಾವತಿ:</strong> ವಿಪರೀತ ಮಳೆಯಿಂದಾಗಿ ನಗರದ ಹೃದಯಭಾಗ ಸೇರಿದಂತೆ ವಿವಿಧೆಡೆ ಇರುವ ಖಾಲಿ ನಿವೇಶನ ಹಾಗೂ ಪಾರ್ಕ್ಗಳಲ್ಲಿ ಗಿಡ, ಪೊದೆಗಳು ಹೆಚ್ಚಳವಾಗಿವೆ. ಇದರಿಂದ ಹಾವುಗಳ ಕಾಟ ಅಧಿಕವಾಗಿದೆ.</p>.<p>ನಗರದ ಹೊಸಮನೆ, ವಿದ್ಯಾಮಂದಿರ, ಭೋವಿ ಕಾಲೊನಿ, ಕಾಗದ ನಗರ, ಸುಭಾಷ್ ನಗರ, ಭೂತನ ಗುಡಿ, ಸಿ.ಬಿ.ಶೆಡ್, ನ್ಯೂ ಕಾಲೊನಿ ಒಳರಸ್ತೆಗಳಲ್ಲಿ ಹಾವುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿವೆ. ಕನಕ ಮಂಟಪ ಮೈದಾನ ಸೇರಿದಂತೆ ಮಕ್ಕಳು ಆಡುವ ಉದ್ಯಾನಗಳ ಇಕ್ಕೆಲಗಳಲ್ಲಿ ಹಾವುಗಳ ಉಪಟಳ ಹೆಚ್ಚಿವೆ. ಸಂಬಂಧ ಪಟ್ಟ ಮಾಲೀಕರು ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸಬೇಕು ಎಂಬುದು ಸುಭಾಷ್ ನಗರ ನಿವಾಸಿಗಳ ಆಗ್ರಹ.</p>.<p>ತಿಂಗಳ ಹಿಂದೆ ಸುಭಾಷ್ ನಗರದ 11ನೇ ವಾರ್ಡ್ನಲ್ಲಿ 12 ವರ್ಷದ ಬಾಲಕನಿಗೆ ಮನೆಯ ಬಾಗಿಲಿನಲ್ಲಿಯೇ ಕೊಳಕಮಂಡಲ ಹಾವು ಕಚ್ಚಿತ್ತು. ಜೀವನ್ಮರಣದ ಸ್ಥಿತಿಗೆ ತಲುಪಿದ್ದ ಬಾಲಕ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.</p>.<p>‘ಮಳೆಯ ಕಾರಣ ನಗರದಲ್ಲಿ ವಿದ್ಯುತ್ ಸ್ಥಗಿತಗೊಂಡು ಕತ್ತಲು ಆವರಿಸಿತ್ತು. ಮನೆಯೊಳಗೆ ನುಸುಳಲು ಯತ್ನಿಸುತ್ತಿದ್ದ ಹಾವನ್ನು ಪುತ್ರ ತೆಗೆದು ಬಿಸಾಡಿದ್ದಾನೆ. ಆ ಹಾವನ್ನು ಮುಟ್ಟಿದ ಕೈ ಗಳಿಗೂ ಸೋಂಕು ತಗುಲಿದೆ. ಈ ವಾರ್ಡಿನಲ್ಲಿ ಕೊಳಕಮಂಡಲ ಹಾವು ಮತ್ತು ಅದರ ಮರಿಗಳು ಹೆಚ್ಚಾಗಿವೆ. ಚಿಕಿತ್ಸೆ ಕೊಡಿಸಲು ನಗರಸಭೆ, ಜನಪ್ರತಿನಿಧಿಗಳಿಂದ ಯಾವುದೇ ನೆರವು ದೊರೆತಿಲ್ಲ’ ಎಂದು ಬಾಲಕನ ಪೋಷಕರು ಅಳಲು ತೋಡಿಕೊಂಡರು.</p>.<p>‘ನಗರದ ನಿವಾಸಿಗಳು ಮನೆಗಳ ಅಕ್ಕ ಪಕ್ಕದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ವಾರ್ಡ್ಗಳಲ್ಲಿನ ಖಾಲಿ ನಿವೇಶನಗಳಲ್ಲಿ ಬೆಳೆದಿರುವ ಗಿಡ-ಪೊದೆಗಳನ್ನು ತೆರವುಗೊಳಿಸಿ ಸ್ವಚ್ಛತೆಗೆ ಒತ್ತು ನೀಡಬೇಕು ಎಂದು ಪ್ರಕಟಣೆ ಹೊರಡಿಸಲಾಗುವುದು. ಸಂಬಂಧಪಟ್ಟವರಿಗೆ ನೋಟಿಸ್ ಸಹ ನೀಡಲಾಗುವುದು’ ಎಂದು ನಗರಸಭೆ ಪರಿಸರ ಅಧಿಕಾರಿ ಪ್ರಭಾಕರ್ ತಿಳಿಸಿದರು.</p>.<p><strong>11 ತಿಂಗಳಲ್ಲಿ 116 ಪ್ರಕರಣ</strong></p><p> ‘ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲಿ 2024ರ ಜನವರಿಯಿಂದ ನವೆಂಬರ್ವರೆಗೆ ಒಟ್ಟು 116 ಹಾವು ಕಚ್ಚಿದ ಪ್ರಕರಣ ದಾಖಲಾಗಿವೆ. ಎಲ್ಲರೂ ಗುಣಮುಖರಾಗಿದ್ದಾರೆ. ಜಿಲ್ಲಾ ಕೇಂದ್ರಗಳಲ್ಲಿ ಹೆಚ್ಚಿನ ಚಿಕಿತ್ಸಾ ಸೌಲಭ್ಯ ಇರುವುದರಿಂದ ಚಿಕಿತ್ಸೆಗೆ ಅಲ್ಲಿಗೆ ಕಳಿಸಲಾಗುತ್ತದೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಎಂ. ಅಶೋಕ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>