ಕನಕಮಂಟಪ ಮೈದಾನದಲ್ಲಿ ಉತ್ಸವದಲ್ಲಿ ದೇವರ ಪೂಜೆ ನೆರವೇರಿದ ನಂತರ ಉಪ ವಿಭಾಗಾಧಿಕಾರಿ ಪ್ರಕಾಶ್ ಶಮಿವೃಕ್ಷಕ್ಕೆ ಪೂಜೆ ಸಲ್ಲಿಸಿದರು. ನಂತರ ಬನ್ನಿ ಮುಡಿಯುವ ಧಾರ್ಮಿಕ ವಿಧಾನ ನಡೆಸಿಕೊಟ್ಟರು. ಪೌರಾಯುಕ್ತ ಮನೋಹರ್, ಕಂದಾಯಾಧಿಕಾರಿ ರಾಜಕುಮಾರ್, ಸುಹಾಸಿನಿ, ಸುಧಾಮಣಿ, ದೇವಾಲಯ ಸಮಿತಿ ಪ್ರಮುಖರಾದ ಸಂತೋಷ್, ಬಿ.ಕೆ.ಶ್ರೀನಾಥ್, ನರಸಿಂಹಾಚಾರ್, ರಮಾಕಾಂತ, ಮಂಜುನಾಥ ಇದ್ದರು.