<p>ಭದ್ರಾವತಿ: ‘ವೀರಶೈವ ಸೇವಾ ಸಮಿತಿಯಿಂದ ಇಲ್ಲಿನ ಮಾಧವಾಚಾರ್ ವೃತ್ತದ ಬಳಿ ಇರುವ ಸಂತ ಸದಾನಂದ ಸ್ವಾಮೀಜಿ ಗದ್ದುಗೆಯನ್ನು ಶ್ರದ್ಧಾ ಭಕ್ತಿಯ ತಾಣವನ್ನಾಗಿ ಅಭಿವೃದ್ಧಿಪಡಿಸಲಾಗುವುದು’ ಎಂದು ಸಮಿತಿಯ ಅಧ್ಯಕ್ಷ ಜಿ.ಆರ್. ಮಹೇಶ್ ಕುಮಾರ್ ತಿಳಿಸಿದರು.</p>.<p>ಈಚೆಗೆ ಸಂತ ಸದಾನಂದ ಸ್ವಾಮೀಜಿ ಗದ್ದುಗೆಯ ಜೀರ್ಣೋದ್ಧಾರ ಕಾರ್ಯದ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.</p>.<p>‘ಸದಾನಂದ ಸ್ವಾಮೀಜಿ ಭದ್ರಾವತಿಯ ಜನರಿಗೆ ಧಾರ್ಮಿಕ ಸಂಸ್ಕಾರ ನೀಡಿದ ಮಹಾತ್ಮರು. ಅವರ ಗದ್ದುಗೆ ಜೀರ್ಣಾವಸ್ಥೆ ತಲುಪಿದ್ದು, ಅದರ ಜೀರ್ಣೋದ್ಧಾರ ಮಾಡಬೇಕೆಂಬುದು ಭಕ್ತರ ಬಹುದಿನದ ಆಸೆಯಾಗಿತ್ತು’ ಎಂದು ಹೇಳಿದರು.</p>.<p>‘ಶಿವಯೋಗದ ಜ್ಞಾನವನ್ನು ಪ್ರಚಾರಪಡಿಸುವುದು ಜೀರ್ಣೋದ್ಧಾರ ಯೋಜನೆಯ ಉದ್ದೇಶ. ಈ ಕಾರ್ಯದ ಅಂಗವಾಗಿ, ಈ ಸ್ಥಳದಲ್ಲಿ ಸದಾನಂದ ಸ್ವಾಮೀಜಿ ಮಠ ಹಾಗೂ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗುವುದು’ ಎಂದರು.</p>.<p>ಸಮಿತಿ ಪದಾಧಿಕಾರಿಗಳಾದ ಟಿ.ಎಸ್. ಆನಂದ ಕುಮಾರ್, ವಾಗೀಶ್ ಕೋಠಿ, ನಿರಂಜನ್, ದೀಪಕ್, ಷಣ್ಮುಖಪ್ಪ, ಚನ್ನೇಶ್, ಚಂದ್ರಣ್ಣ, ಶಿವಾನಂದ, ಜಯಪ್ಪ ಉಪಸ್ಥಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260518-42-634715285</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಭದ್ರಾವತಿ: ‘ವೀರಶೈವ ಸೇವಾ ಸಮಿತಿಯಿಂದ ಇಲ್ಲಿನ ಮಾಧವಾಚಾರ್ ವೃತ್ತದ ಬಳಿ ಇರುವ ಸಂತ ಸದಾನಂದ ಸ್ವಾಮೀಜಿ ಗದ್ದುಗೆಯನ್ನು ಶ್ರದ್ಧಾ ಭಕ್ತಿಯ ತಾಣವನ್ನಾಗಿ ಅಭಿವೃದ್ಧಿಪಡಿಸಲಾಗುವುದು’ ಎಂದು ಸಮಿತಿಯ ಅಧ್ಯಕ್ಷ ಜಿ.ಆರ್. ಮಹೇಶ್ ಕುಮಾರ್ ತಿಳಿಸಿದರು.</p>.<p>ಈಚೆಗೆ ಸಂತ ಸದಾನಂದ ಸ್ವಾಮೀಜಿ ಗದ್ದುಗೆಯ ಜೀರ್ಣೋದ್ಧಾರ ಕಾರ್ಯದ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.</p>.<p>‘ಸದಾನಂದ ಸ್ವಾಮೀಜಿ ಭದ್ರಾವತಿಯ ಜನರಿಗೆ ಧಾರ್ಮಿಕ ಸಂಸ್ಕಾರ ನೀಡಿದ ಮಹಾತ್ಮರು. ಅವರ ಗದ್ದುಗೆ ಜೀರ್ಣಾವಸ್ಥೆ ತಲುಪಿದ್ದು, ಅದರ ಜೀರ್ಣೋದ್ಧಾರ ಮಾಡಬೇಕೆಂಬುದು ಭಕ್ತರ ಬಹುದಿನದ ಆಸೆಯಾಗಿತ್ತು’ ಎಂದು ಹೇಳಿದರು.</p>.<p>‘ಶಿವಯೋಗದ ಜ್ಞಾನವನ್ನು ಪ್ರಚಾರಪಡಿಸುವುದು ಜೀರ್ಣೋದ್ಧಾರ ಯೋಜನೆಯ ಉದ್ದೇಶ. ಈ ಕಾರ್ಯದ ಅಂಗವಾಗಿ, ಈ ಸ್ಥಳದಲ್ಲಿ ಸದಾನಂದ ಸ್ವಾಮೀಜಿ ಮಠ ಹಾಗೂ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗುವುದು’ ಎಂದರು.</p>.<p>ಸಮಿತಿ ಪದಾಧಿಕಾರಿಗಳಾದ ಟಿ.ಎಸ್. ಆನಂದ ಕುಮಾರ್, ವಾಗೀಶ್ ಕೋಠಿ, ನಿರಂಜನ್, ದೀಪಕ್, ಷಣ್ಮುಖಪ್ಪ, ಚನ್ನೇಶ್, ಚಂದ್ರಣ್ಣ, ಶಿವಾನಂದ, ಜಯಪ್ಪ ಉಪಸ್ಥಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260518-42-634715285</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>