ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರ ಸಾಧನೆಗಳ ಮಾಹಿತಿಗೆ ಅಭಿಯಾನ

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ.ಮೇಘರಾಜ್ ಮಾಹಿತಿ
Last Updated 5 ಜೂನ್ 2020, 12:38 IST
ಅಕ್ಷರ ಗಾತ್ರ

ಶಿವಮೊಗ್ಗ: ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರಗಳಒಂದು ವರ್ಷದ ಸಾಧನೆ, ಸಂಸದ ಬಿ.ವೈ.ರಾಘವೇಂದ್ರ ಅವರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಮಾಹಿತಿ ಸಾರ್ವಜನಿಕರಿಗೆತಲುಪಿಸಲುಅಭಿಯಾನಹಮ್ಮಿಕೊಳ್ಳಲಾಗಿದೆ.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ಕೇಂದ್ರ, ರಾಜ್ಯಸರ್ಕಾರಹಾಗೂ ಸಂಸದ ಬಿ.ವೈ.ರಾಘವೇಂದ್ರಅವರ ವರ್ಷದ ಸಾಧನೆಗಳ ಮೂರು ಕಿರುಹೊತ್ತಿಗೆಬಿಡುಗಡೆಮಾಡಿದಪಕ್ಷದಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ.ಮೇಘರಾಜ್ ನಂತರಸುದ್ದಿಗಾರರ ಜತೆಮಾತನಾಡಿದರು.

ಜೂನ್‌ 5ರಿಂದಲೇ ಬಿಜೆಪಿ ಮನೆ ಮನೆ ಸಂಪರ್ಕ ಅಭಿಯಾನಆರಂಭಿಸಿದೆ.ಆಯಾ ವಿಧಾನಸಭಾ ಕ್ಷೇತ್ರದ ಶಾಸಕರು ಈ ಅಭಿಯಾನಗಳಿಗೆ ಚಾಲನೆ ನೀಡುವರು. ಜಿಲ್ಲೆಯ 1,775 ಬೂತ್‌ಗಳಿಗೂಬಿಜೆಪಿ ಸಾಧನೆಯ ಮೂರು ಕರಪತ್ರಗಳು ತಲುಪಲಿವೆ. ಜತೆಗೆ ಸಾರ್ವಜನಿಕರ ಜತೆ ಸಂವಾದ ನಡೆಸಲಾಗುವುದು ಎಂದು ವಿವರ ನೀಡಿದರು.

ದೇಶದ ಭದ್ರತೆಗೆ ಮೋದಿಸರ್ಕಾರಮೊದಲ ಆದ್ಯತೆ ನೀಡಿದೆ. ದೇಶ ಕೆಣಕಿದವರ ವಿರುದ್ಧ ಸರ್ಜಿಕಲ್‌ಸ್ಟ್ರೈಕ್ ಯಶಸ್ವಿಯಾಗಿ ಮಾಡಿದೆ. ಇಡೀ ದೇಶಕ್ಕೆ ಒಂದೇ ತೆರಿಗೆ ಪದ್ಧತಿ ಜಾರಿ ಮಾಡಿದ್ದಾರೆ. ರೈತರಿಗೆ ಬೆಂಬಲ ಬೆಲೆನೀಡಿದ್ದಾರೆ.ಮೊದಲ ಐದು ವರ್ಷದಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳ ಮೂಲಕ ಜನರನ್ನು ಮುಟ್ಟಿದ್ದಾರೆ.ನಂತರದ ಒಂದು ವರ್ಷದಲ್ಲಿ ಭಾರತವನ್ನು ವಿಶ್ವಮಾನ್ಯವಾಗಿಸಲು ಶ್ರಮಿಸಿದ್ದಾರೆ ಎಂದರು.

ದೇಶದ ಏಕತೆಗಾಗಿ370ವಿಧಿತೆಗೆದು ಹಾಕಲಾಗಿದೆ. ರಕ್ಷಣಾ ಕ್ಷೇತ್ರದ ಮೂರು ವಿಭಾಗ ಸೇರಿಸಿ ಮೊದಲ ಸೇನಾ ಮುಖ್ಯಸ್ಥರನ್ನು ನೇಮಕ ಮಾಡಲಾಗಿದೆ. ತ್ರಿವಳಿ ತಲಾಕ್ ರದ್ದು ಮಾಡಿದೆ. ರಾಮಮಂದಿರ ನಿರ್ಮಾಣವಿವಾದವನ್ನು ಸೂಕ್ಷ್ಮವಾಗಿ ಬಗೆಹರಿಸಿದೆ. ಆಡಳಿತ ಸುಧಾರಣೆಗೆ ಹೆಚ್ಚಿನ ಗಮನ ನೀಡಿದೆ ಎಂದು ಶ್ಲಾಘಿಸಿದರು.

ಕೊರೊನಾ ಸಂಕಷ್ಟದಲ್ಲಿ ಜನರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಸಹಕಾರ ನೀಡಿದೆ.ಸಧೃಡ ಭಾರತ ಕಟ್ಟಲು ಸರ್ಕಾರ ಮುಂದಾಗಿದೆ.ಅದಕ್ಕಾಗಿ ₨ 20 ಲಕ್ಷಕೋಟಿನೆರವು ನೀಡಿದೆ ಎಂದು ವಿವರ ನೀಡಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರವೂ ಉತ್ತಮ ಆಡಳಿತ ನೀಡುತ್ತಿದೆ. ಲಾಕ್‌ಡೌನ್‌ನಿಂದತೊಂದರೆಗೆ ಒಳಗಾದ ಕಾರ್ಮಿಕರಿಗೆ ₨5 ಸಾವಿರ ನೀಡಲಾಗಿದೆ.ಜಿಲ್ಲೆಯಲ್ಲಿ ಪ್ರಸ್ತುತ 42 ಸಾವಿರ ಕಾರ್ಮಿಕರಿಗೆ ಹಣ ತಲುಪಿದೆ. ಕೋವಿಡ್ ನಿಯಂತ್ರಣಕ್ಕಾಗಿ ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ತಲಾ ₨ 3 ಸಾವಿರಜಮೆ ಮಾಡಲಾಗಿದೆ ಎಂದರು.

ಸಂಸದ ಬಿ.ವೈ.ರಾಘವೇಂದ್ರ ಅವರು ಒಂದು ವರ್ಷದಲ್ಲಿ ನೂರಾರು ಸಾಧನೆ ಮಾಡಿದ್ದಾರೆ. ಅಲ್ಪ ಅವಧಿಯಲ್ಲಿ ಹೆಚ್ಚು ಅಭಿವೃದ್ಧಿ ಕೆಲಸ ಮಾಡಿದ ಸಂಸದರ ಪಟ್ಟಿಯಲ್ಲಿದ್ದಾರೆ.ಅವರ ಸಾಧನೆ ಜನರಿಗೆ ತಿಳಿಸುವ ಕೆಲಸ ಪಕ್ಷ ಮಾಡಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿಬಿಜೆಪಿಮುಖಂಡರಾದಮಧುಸೂದನ್, ರಮೇಶ್, ಸುನೀತಾ ಅಣ್ಣಪ್ಪ, ಎನ್.ಡಿ.ಸತೀಶ್, ಋಷಿಕೇಶ್ ಪೈ, ಶಿವಕುಮಾರ್, ಅಣ್ಣಪ್ಪಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT