ಹೆಚ್ಚಾದ ಮಳೆ; ಆತಂಕಗೊಂಡ ಕೃಷಿಕ: ಮೆಣಸಿನಕಾಳು ಬೆಳೆದು ಮೂರು ವರ್ಷ ಉತ್ತಮ ಆದಾಯ ಗಳಿಸಿದ್ದ ರವಿ ಗೌಡ, ಈ ಬಾರಿ ಆದಾಯ ದ್ವಿಗುಣಗೊಳ್ಳುವ ನಿರೀಕ್ಷೆಯಲ್ಲಿದ್ದರು. ಆದರೆ, ಪ್ರಸಕ್ತ ವರ್ಷ ಸುರಿದ ಭಾರಿ ಮಳೆಯಿಂದ ಸ್ವಲ್ಪ ಆತಂಕಗೊಂಡಿದ್ದಾರೆ. ಮಳೆ ಸುರಿದ ಸಂದರ್ಭದಲ್ಲಿ ತೋಟದಲ್ಲಿ ಹೆಚ್ಚು ನೀರು ಸಂಗ್ರಹವಾಗಿದ್ದರಿಂದ ಮೆಣಸಿನಕಾಳಿನ ಕೆಲವು ಬಳ್ಳಿಗಳು ಒಣಗಿವೆ. ಅದನ್ನು ಹೊರತುಪಡಿಸಿ ಉತ್ತಮ ಇಳುವರಿ ಪಡೆಯುವ ನಿರೀಕ್ಷೆ ಹೊಂದಿದ್ದಾರೆ. ಮೆಣಸಿನಕಾಳಿನ ಬಳ್ಳಿ ಒಣಗದಂತೆ ತಡೆಯಲು ಅಗತ್ಯ ಕ್ರಮ ಕೈಗೊಂಡಿದ್ದಾರೆ.