ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರಾವತಿಯಲ್ಲಿ ಬೀದಿನಾಯಿ ದಾಳಿಗೆ ಬಾಲಕ ಬಲಿ

Last Updated 30 ನವೆಂಬರ್ 2022, 20:18 IST
ಅಕ್ಷರ ಗಾತ್ರ

ಶಿವಮೊಗ್ಗ: ಭದ್ರಾವತಿ ತಾಲ್ಲೂಕಿನ ದಡಮಘಟ್ಟದಲ್ಲಿ ಬುಧವಾರ ಬೀದಿ ನಾಯಿಗಳ ದಾಳಿಗೆ ಮೂರೂವರೆ ವರ್ಷದ ಬಾಲಕ ಬಲಿಯಾಗಿದ್ದಾನೆ.

ಗ್ರಾಮದ ನಿವಾಸಿ ಸಯ್ಯದ್ನಸ್ರುಲ್ಲಾ ಅವರ ಪುತ್ರ ಸೈಯದ್ ಹರ್ಷದ್ ಮದನಿ ಸಾವಿಗೀಡಾದ ಬಾಲಕ.

ಮನೆಯ ಮುಂದಿನ ಅಂಗಳದಲ್ಲಿ ಪೋಷಕರು ಯಂತ್ರದ ಮೂಲಕ ಭತ್ತ ಬೇರ್ಪಡಿಸುತ್ತಿದ್ದರು. ಈ ವೇಳೆ ಮದನಿಯನ್ನು ಬೈಕ್ ಮೇಲೆ ಕೂರಿಸಿದ್ದರು. ಬೈಕ್‌ನಿಂದ ಬಾಲಕ ಕೆಳಗಿಳಿದ ಸಂದರ್ಭದಲ್ಲಿ ಏಳೆಂಟು ನಾಯಿಗಳು ದಾಳಿ ನಡೆಸಿದವು. ಬಾಲಕನಿಗೆ ಸಿಕ್ಕ ಸಿಕ್ಕ ಕಡೆ ಕಚ್ಚಿದ್ದು, ಮೆದುಳನ್ನು ತಿಂದು ಹಾಕಿವೆ.

ಈ ವೇಳೆ ಅಪ್ಪ ಸೈಯದ್ ನಸ್ರುಲ್ಲಾ ನಾಯಿಗಳನ್ನು ಓಡಿಸಿ ಮಗನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲೇ ಬಾಲಕ ಮೃತಪಟ್ಟಿದ್ದಾನೆ.

ಈ ಸಂಬಂಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT