ಶಿವಮೊಗ್ಗ: ಭದ್ರಾವತಿ ತಾಲ್ಲೂಕಿನ ದಡಮಘಟ್ಟದಲ್ಲಿ ಬುಧವಾರ ಬೀದಿ ನಾಯಿಗಳ ದಾಳಿಗೆ ಮೂರೂವರೆ ವರ್ಷದ ಬಾಲಕ ಬಲಿಯಾಗಿದ್ದಾನೆ.
ಗ್ರಾಮದ ನಿವಾಸಿ ಸಯ್ಯದ್ನಸ್ರುಲ್ಲಾ ಅವರ ಪುತ್ರ ಸೈಯದ್ ಹರ್ಷದ್ ಮದನಿ ಸಾವಿಗೀಡಾದ ಬಾಲಕ.
ಮನೆಯ ಮುಂದಿನ ಅಂಗಳದಲ್ಲಿ ಪೋಷಕರು ಯಂತ್ರದ ಮೂಲಕ ಭತ್ತ ಬೇರ್ಪಡಿಸುತ್ತಿದ್ದರು. ಈ ವೇಳೆ ಮದನಿಯನ್ನು ಬೈಕ್ ಮೇಲೆ ಕೂರಿಸಿದ್ದರು. ಬೈಕ್ನಿಂದ ಬಾಲಕ ಕೆಳಗಿಳಿದ ಸಂದರ್ಭದಲ್ಲಿ ಏಳೆಂಟು ನಾಯಿಗಳು ದಾಳಿ ನಡೆಸಿದವು. ಬಾಲಕನಿಗೆ ಸಿಕ್ಕ ಸಿಕ್ಕ ಕಡೆ ಕಚ್ಚಿದ್ದು, ಮೆದುಳನ್ನು ತಿಂದು ಹಾಕಿವೆ.
ಈ ವೇಳೆ ಅಪ್ಪ ಸೈಯದ್ ನಸ್ರುಲ್ಲಾ ನಾಯಿಗಳನ್ನು ಓಡಿಸಿ ಮಗನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲೇ ಬಾಲಕ ಮೃತಪಟ್ಟಿದ್ದಾನೆ.
ಈ ಸಂಬಂಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.