<p><strong>ತುಮರಿ:</strong> ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಮಲೆನಾಡಿನ ಕುಗ್ರಾಮಗಳ ಅರಣ್ಯದಂಚಿನಲ್ಲಿ ವಾಸವಿರುವ ಸಾಕಷ್ಟು ಜನರ ಬವಣೆ ಮಾತ್ರ ಬದಲಾಗಿಲ್ಲ.</p>.<p>ಹೊರ ಜಗತ್ತಿಗೆ ಸಂಪರ್ಕ ಸಾಧಿಸಲು ಸಮರ್ಪಕ ಮೊಬೈಲ್ ನೆಟ್ವರ್ಕ್ ಇಲ್ಲ, ಪಕ್ಕದ ಊರು, ಹತ್ತಿರದ ಪಟ್ಟಣದ ಜೊತೆಗೆ ಸಂಪರ್ಕ ಸಾಧಿಸಲು ಹಿನ್ನೀರ ದಾಟಲು ಸೇತುವೆಗಳೂ ಇಲ್ಲ. ಹೊರ ಪ್ರಪಂಚದ ಜತೆಗಿನ ಸಂಪರ್ಕ ಸುಲಭವಾಗಿಸುವ ಭರವಸೆಯಾಗಿ ಕಾಣಿಸಿದ್ದ ‘ಸೇತುವೆ ಭಾಗ್ಯ’ ಶರಾವತಿ ಎಡದಂಡೆಯ ಎಲ್ಲಾ ಭಾಗಕ್ಕೂ ಇನ್ನೂ ಪೂರ್ಣ ಪ್ರಮಾಣದಲ್ಲಿ ಸಿಕ್ಕಿಲ್ಲ.</p>.<p>‘ತಾಲ್ಲೂಕಿನ ಕರೂರು ಹೋಬಳಿಯಿಂದ ಜೋಗ, ಕಾರ್ಗಲ್ಗೆ ಸಂಪರ್ಕ ಕಲ್ಪಿಸುವ ಹಲ್ಕೆ, ಮುಪ್ಪಾನೆ ಲಾಂಚ್ ಕಡವು ಮಾರ್ಗದಲ್ಲಿ ಸೇತುವೆ ನಿರ್ಮಿಸಬೇಕು ಎಂಬ ಕೂಗು ದಶಕದಿಂದಲೂ ಕೇಳಿ ಬರುತ್ತಲೇ ಇದೆ. ಆದರೆ, ಪ್ರತಿ ಚುನಾವಣೆ ಸಮಯದಲ್ಲಿ ಈ ವಿಚಾರ ಚರ್ಚೆಗೆ ಬರುತ್ತದೆ. ಆದರೆ, ಬೇಡಿಕೆ ಈಡೇರಿಕೆಗೆ ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರುತ್ತಿಲ್ಲ’ ಎಂಬುದು ಹಲ್ಕೆ, ಮುಪ್ಪಾನೆ, ಮಾರಲಗೋಡು, ಕಳೂರು ಭಾಗದ ಜನರ ನೋವಿನ ನುಡಿಯಾಗಿದೆ.</p>.<p>ಪ್ರತಿ ಮಳೆಗಾಲದಲ್ಲಿ ಇಲ್ಲಿನ ಜನ ಸಂಕಷ್ಟಕ್ಕೀಡಾಗುತ್ತಾರೆ. ಶರಾವತಿ ಹಿನ್ನೀರಿನಲ್ಲಿ ನೀರಿನ ಪ್ರವಾಹ ಹೆಚ್ಚಾದಾಗ ಹಲವು ಬಾರಿ ಲಾಂಚ್ ಸೇವೆ ಅಸ್ತವ್ಯಸ್ತ ಆಗಲಿದೆ. ಇದರಿಂದ ಸುತ್ತಿ ಬಳಸಿ ಹೋಗಬೇಕಾಗಿದೆ. ಇಲ್ಲಿ ಒಂದು ಸೇತುವೆ ನಿರ್ಮಿಸಿದರೆ ತಾಲ್ಲೂಕು ಕೇಂದ್ರ ಹಾಗೂ ಕಾರ್ಗಲ್ ಪಟ್ಟಣ ಹತ್ತಿರವಾಗಲಿದೆ.</p>.<p>ಜೋಗ ಜಲಪಾತದಿಂದ ಚನ್ನಗೊಂಡ ಗ್ರಾಮಗಳ ಹಳ್ಳಿಗಳು ಸೇರಿದಂತೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಅತಿ ಹತ್ತಿರದ ದಾರಿ ಮುಪ್ಪಾನೆ ಲಾಂಚ್ ಮಾರ್ಗ. ಜೋಗದ ಮೂಲಕ ಮುಪ್ಪಾನೆ ಮಾರ್ಗದಲ್ಲಿ ಸಿಗಂದೂರಿಗೆ ತೆರಳಲು ಸಮಯ ಮತ್ತು ಖರ್ಚು ಉಳಿಯಲಿದೆ. ಹಲವು ವರ್ಷಗಳಿಂದ ಈ ವ್ಯಾಪ್ತಿಯ ಜನರು ಶರಾವತಿ ಹಿನ್ನೀರು ದಾಟಲು ಲಾಂಚ್ ಬಳಸುತ್ತಿದ್ದಾರೆ.</p>.<p>‘2017ರಲ್ಲಿ ಅಂದಿನ ಸರ್ಕಾರ ಹಲ್ಕೆ ಮುಪ್ಪಾನೆ ಮಾರ್ಗದಲ್ಲಿ ಕಿರು ಲಾಂಚ್ ಸೇವೆ ಆರಂಭಿಸಲು ಮುತುವರ್ಜಿ ವಹಿಸಿತ್ತು. ಮುಪ್ಪಾನೆ, ಹಾಗೂ ಹಲ್ಕೆ ಎರಡು ಭಾಗದಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದರಿಂದ ಅಭಿವೃದ್ದಿಗೆ ಕ್ರಮ ಕೈಗೊಳ್ಳಲಾಗಿತ್ತು. ಆದರೆ, ಸೇತುವೆ ನಿರ್ಮಾಣದ ಕನಸು ಮಾತ್ರ ಇಂದಿಗೂ ನನಸಾಗಿಲ್ಲ’ ಎಂದು ಗ್ರಾಮದ ತಿಮ್ಮಪ್ಪ ಬೇಸರ ವ್ಯಕ್ತಪಡಿಸಿದರು.</p>.<p><strong>ಅನುಕೂಲ:</strong></p>.<p>ತುರ್ತು ಸಂದರ್ಭದಲ್ಲಿ ಪೊಲೀಸರು, ಮೆಸ್ಕಾಂ ಸಿಬ್ಬಂದಿ ಕರೂರು ಹೋಬಳಿಯ ಗ್ರಾಮಗಳಿಗೆ ತಲುಪಲು ಲಾಂಚ್ ಬಳಕೆ ಮಾಡಿಕೊಳ್ಳುತ್ತಿದ್ದರು. ಶಿರಸಿ, ಸಿದ್ಧಾಪುರ ಮಾರ್ಗದಲ್ಲಿ ಓಡಾಡುವವರಿಗೂ ಲಾಂಚ್ ಅನುಕೂಲವಾಗಿತ್ತು. ಸಿಗಂದೂರು ಪ್ರವಾಸಿಗರೂ ಈ ಮಾರ್ಗದಲ್ಲಿ ಓಡಾಡುತ್ತಿದ್ದರು. ಮುಪ್ಪಾನೆಯಲ್ಲಿ ಸರ್ಕಾರ ಸೇತುವೆ ನಿರ್ಮಿಸಿದರೆ ದ್ವೀಪದ ಹಲವು ಹಳ್ಳಿಗಳಿಗೆ ಸಂಪರ್ಕ ಸುಲಭ. ಜೊತೆಗೆ ಪ್ರವಾಸೋದ್ಯಮ ದೃಷ್ಟಿಯಿಂದ ಈ ಮಾರ್ಗದಲ್ಲಿ ಸೇತುವೆಯ ಅಗತ್ಯವಿದೆ ಎಂದು ಅವರು ಹೇಳಿದರು.</p>.<p>ಪ್ರವಾಸೋದ್ಯಮ ಅಭಿವೃದ್ಧಿಯ ದೃಷ್ಟಿಯಿಂದಲೂ ಈ ಮಾರ್ಗ ಸಾಕಷ್ಟು ಉಪಯುಕ್ತವಾಗಿದೆ. ಜೋಗದಿಂದ ಸಿಗಂದೂರಿಗೆ ಕೇವಲ 30 ಕಿಲೋ ಮೀಟರ್ ಅಂತರದಲ್ಲಿ ಸಾಗಬಹುದು. ಇಲ್ಲದಿದ್ದರೆ ಸಾಗರ, ಸಿಗಂದೂರು ಸೇತುವೆ ಮೂಲಕ 80 ಕಿಲೋ ಮೀಟರ್ ದೂರ ಸಾಗಿ ಸಿಗಂದೂರು ದೇವಸ್ಥಾನ ತಲುಪಬೇಕಿದೆ. ಇದರಿಂದ ಪ್ರವಾಸಿಗರಿಗೆ ಸಹ ಸಾಕಷ್ಟು ಅನಾನುಕೂಲ ಆಗಲಿದೆ.</p>.<p> <strong>ನೀರು ಕಡಿಮೆಯಾದರೆ ಲಾಂಚ್ ಸ್ಥಗಿತ</strong> </p><p>ಪ್ರತಿ ವರ್ಷ ಮೇ ತಿಂಗಳಲ್ಲಿ ಶರಾವತಿ ಹಿನ್ನೀರಿನಲ್ಲಿ ನೀರಿನ ಮಟ್ಟ ಇಳಿಕೆಯಾದಾಗ ಲಾಂಚ್ ಸೇವೆ ಸಹ ಸ್ಥಗಿತಗೊಳ್ಳುತ್ತದೆ. ಇದರಿಂದ ಕರೂರು ಹೋಬಳಿಯ ಕಳೂರು ಮಾರಲಗೋಡು ಚನ್ನಗೊಂಡ ಸೇರಿದಂತೆ ಸುಮಾರು 60 ಹಳ್ಳಿಗಳ ಜನರು ಪಟ್ಟಣಕ್ಕೆ ತೆರಳಲು ತೀವ್ರ ಕಷ್ಟಪಡುತ್ತಾರೆ. ಇದರಿಂದ ಹೆಚ್ಚಿನ ಖರ್ಚು ಹಾಗೂ ಸಮಯವೂ ವ್ಯರ್ಥ ಆಗಲಿದೆ ಎನ್ನುತ್ತಾರೆ ಈ ಗ್ರಾಮಸ್ಥರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮರಿ:</strong> ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಮಲೆನಾಡಿನ ಕುಗ್ರಾಮಗಳ ಅರಣ್ಯದಂಚಿನಲ್ಲಿ ವಾಸವಿರುವ ಸಾಕಷ್ಟು ಜನರ ಬವಣೆ ಮಾತ್ರ ಬದಲಾಗಿಲ್ಲ.</p>.<p>ಹೊರ ಜಗತ್ತಿಗೆ ಸಂಪರ್ಕ ಸಾಧಿಸಲು ಸಮರ್ಪಕ ಮೊಬೈಲ್ ನೆಟ್ವರ್ಕ್ ಇಲ್ಲ, ಪಕ್ಕದ ಊರು, ಹತ್ತಿರದ ಪಟ್ಟಣದ ಜೊತೆಗೆ ಸಂಪರ್ಕ ಸಾಧಿಸಲು ಹಿನ್ನೀರ ದಾಟಲು ಸೇತುವೆಗಳೂ ಇಲ್ಲ. ಹೊರ ಪ್ರಪಂಚದ ಜತೆಗಿನ ಸಂಪರ್ಕ ಸುಲಭವಾಗಿಸುವ ಭರವಸೆಯಾಗಿ ಕಾಣಿಸಿದ್ದ ‘ಸೇತುವೆ ಭಾಗ್ಯ’ ಶರಾವತಿ ಎಡದಂಡೆಯ ಎಲ್ಲಾ ಭಾಗಕ್ಕೂ ಇನ್ನೂ ಪೂರ್ಣ ಪ್ರಮಾಣದಲ್ಲಿ ಸಿಕ್ಕಿಲ್ಲ.</p>.<p>‘ತಾಲ್ಲೂಕಿನ ಕರೂರು ಹೋಬಳಿಯಿಂದ ಜೋಗ, ಕಾರ್ಗಲ್ಗೆ ಸಂಪರ್ಕ ಕಲ್ಪಿಸುವ ಹಲ್ಕೆ, ಮುಪ್ಪಾನೆ ಲಾಂಚ್ ಕಡವು ಮಾರ್ಗದಲ್ಲಿ ಸೇತುವೆ ನಿರ್ಮಿಸಬೇಕು ಎಂಬ ಕೂಗು ದಶಕದಿಂದಲೂ ಕೇಳಿ ಬರುತ್ತಲೇ ಇದೆ. ಆದರೆ, ಪ್ರತಿ ಚುನಾವಣೆ ಸಮಯದಲ್ಲಿ ಈ ವಿಚಾರ ಚರ್ಚೆಗೆ ಬರುತ್ತದೆ. ಆದರೆ, ಬೇಡಿಕೆ ಈಡೇರಿಕೆಗೆ ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರುತ್ತಿಲ್ಲ’ ಎಂಬುದು ಹಲ್ಕೆ, ಮುಪ್ಪಾನೆ, ಮಾರಲಗೋಡು, ಕಳೂರು ಭಾಗದ ಜನರ ನೋವಿನ ನುಡಿಯಾಗಿದೆ.</p>.<p>ಪ್ರತಿ ಮಳೆಗಾಲದಲ್ಲಿ ಇಲ್ಲಿನ ಜನ ಸಂಕಷ್ಟಕ್ಕೀಡಾಗುತ್ತಾರೆ. ಶರಾವತಿ ಹಿನ್ನೀರಿನಲ್ಲಿ ನೀರಿನ ಪ್ರವಾಹ ಹೆಚ್ಚಾದಾಗ ಹಲವು ಬಾರಿ ಲಾಂಚ್ ಸೇವೆ ಅಸ್ತವ್ಯಸ್ತ ಆಗಲಿದೆ. ಇದರಿಂದ ಸುತ್ತಿ ಬಳಸಿ ಹೋಗಬೇಕಾಗಿದೆ. ಇಲ್ಲಿ ಒಂದು ಸೇತುವೆ ನಿರ್ಮಿಸಿದರೆ ತಾಲ್ಲೂಕು ಕೇಂದ್ರ ಹಾಗೂ ಕಾರ್ಗಲ್ ಪಟ್ಟಣ ಹತ್ತಿರವಾಗಲಿದೆ.</p>.<p>ಜೋಗ ಜಲಪಾತದಿಂದ ಚನ್ನಗೊಂಡ ಗ್ರಾಮಗಳ ಹಳ್ಳಿಗಳು ಸೇರಿದಂತೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಅತಿ ಹತ್ತಿರದ ದಾರಿ ಮುಪ್ಪಾನೆ ಲಾಂಚ್ ಮಾರ್ಗ. ಜೋಗದ ಮೂಲಕ ಮುಪ್ಪಾನೆ ಮಾರ್ಗದಲ್ಲಿ ಸಿಗಂದೂರಿಗೆ ತೆರಳಲು ಸಮಯ ಮತ್ತು ಖರ್ಚು ಉಳಿಯಲಿದೆ. ಹಲವು ವರ್ಷಗಳಿಂದ ಈ ವ್ಯಾಪ್ತಿಯ ಜನರು ಶರಾವತಿ ಹಿನ್ನೀರು ದಾಟಲು ಲಾಂಚ್ ಬಳಸುತ್ತಿದ್ದಾರೆ.</p>.<p>‘2017ರಲ್ಲಿ ಅಂದಿನ ಸರ್ಕಾರ ಹಲ್ಕೆ ಮುಪ್ಪಾನೆ ಮಾರ್ಗದಲ್ಲಿ ಕಿರು ಲಾಂಚ್ ಸೇವೆ ಆರಂಭಿಸಲು ಮುತುವರ್ಜಿ ವಹಿಸಿತ್ತು. ಮುಪ್ಪಾನೆ, ಹಾಗೂ ಹಲ್ಕೆ ಎರಡು ಭಾಗದಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದರಿಂದ ಅಭಿವೃದ್ದಿಗೆ ಕ್ರಮ ಕೈಗೊಳ್ಳಲಾಗಿತ್ತು. ಆದರೆ, ಸೇತುವೆ ನಿರ್ಮಾಣದ ಕನಸು ಮಾತ್ರ ಇಂದಿಗೂ ನನಸಾಗಿಲ್ಲ’ ಎಂದು ಗ್ರಾಮದ ತಿಮ್ಮಪ್ಪ ಬೇಸರ ವ್ಯಕ್ತಪಡಿಸಿದರು.</p>.<p><strong>ಅನುಕೂಲ:</strong></p>.<p>ತುರ್ತು ಸಂದರ್ಭದಲ್ಲಿ ಪೊಲೀಸರು, ಮೆಸ್ಕಾಂ ಸಿಬ್ಬಂದಿ ಕರೂರು ಹೋಬಳಿಯ ಗ್ರಾಮಗಳಿಗೆ ತಲುಪಲು ಲಾಂಚ್ ಬಳಕೆ ಮಾಡಿಕೊಳ್ಳುತ್ತಿದ್ದರು. ಶಿರಸಿ, ಸಿದ್ಧಾಪುರ ಮಾರ್ಗದಲ್ಲಿ ಓಡಾಡುವವರಿಗೂ ಲಾಂಚ್ ಅನುಕೂಲವಾಗಿತ್ತು. ಸಿಗಂದೂರು ಪ್ರವಾಸಿಗರೂ ಈ ಮಾರ್ಗದಲ್ಲಿ ಓಡಾಡುತ್ತಿದ್ದರು. ಮುಪ್ಪಾನೆಯಲ್ಲಿ ಸರ್ಕಾರ ಸೇತುವೆ ನಿರ್ಮಿಸಿದರೆ ದ್ವೀಪದ ಹಲವು ಹಳ್ಳಿಗಳಿಗೆ ಸಂಪರ್ಕ ಸುಲಭ. ಜೊತೆಗೆ ಪ್ರವಾಸೋದ್ಯಮ ದೃಷ್ಟಿಯಿಂದ ಈ ಮಾರ್ಗದಲ್ಲಿ ಸೇತುವೆಯ ಅಗತ್ಯವಿದೆ ಎಂದು ಅವರು ಹೇಳಿದರು.</p>.<p>ಪ್ರವಾಸೋದ್ಯಮ ಅಭಿವೃದ್ಧಿಯ ದೃಷ್ಟಿಯಿಂದಲೂ ಈ ಮಾರ್ಗ ಸಾಕಷ್ಟು ಉಪಯುಕ್ತವಾಗಿದೆ. ಜೋಗದಿಂದ ಸಿಗಂದೂರಿಗೆ ಕೇವಲ 30 ಕಿಲೋ ಮೀಟರ್ ಅಂತರದಲ್ಲಿ ಸಾಗಬಹುದು. ಇಲ್ಲದಿದ್ದರೆ ಸಾಗರ, ಸಿಗಂದೂರು ಸೇತುವೆ ಮೂಲಕ 80 ಕಿಲೋ ಮೀಟರ್ ದೂರ ಸಾಗಿ ಸಿಗಂದೂರು ದೇವಸ್ಥಾನ ತಲುಪಬೇಕಿದೆ. ಇದರಿಂದ ಪ್ರವಾಸಿಗರಿಗೆ ಸಹ ಸಾಕಷ್ಟು ಅನಾನುಕೂಲ ಆಗಲಿದೆ.</p>.<p> <strong>ನೀರು ಕಡಿಮೆಯಾದರೆ ಲಾಂಚ್ ಸ್ಥಗಿತ</strong> </p><p>ಪ್ರತಿ ವರ್ಷ ಮೇ ತಿಂಗಳಲ್ಲಿ ಶರಾವತಿ ಹಿನ್ನೀರಿನಲ್ಲಿ ನೀರಿನ ಮಟ್ಟ ಇಳಿಕೆಯಾದಾಗ ಲಾಂಚ್ ಸೇವೆ ಸಹ ಸ್ಥಗಿತಗೊಳ್ಳುತ್ತದೆ. ಇದರಿಂದ ಕರೂರು ಹೋಬಳಿಯ ಕಳೂರು ಮಾರಲಗೋಡು ಚನ್ನಗೊಂಡ ಸೇರಿದಂತೆ ಸುಮಾರು 60 ಹಳ್ಳಿಗಳ ಜನರು ಪಟ್ಟಣಕ್ಕೆ ತೆರಳಲು ತೀವ್ರ ಕಷ್ಟಪಡುತ್ತಾರೆ. ಇದರಿಂದ ಹೆಚ್ಚಿನ ಖರ್ಚು ಹಾಗೂ ಸಮಯವೂ ವ್ಯರ್ಥ ಆಗಲಿದೆ ಎನ್ನುತ್ತಾರೆ ಈ ಗ್ರಾಮಸ್ಥರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>