ಭದ್ರಾವತಿ ಮೂಲಕ ಶಿಕಾರಿಪುರಕ್ಕೆ ತೆರಳುವ ಮಾರ್ಗ ಮಧ್ಯದಲ್ಲಿ ಅವರು ಶಿವಮೊಗ್ಗಕ್ಕೆ ಬಂದಿದ್ದರು. ವಿಶ್ರಾಂತಿಯ ಮೂಡ್ನಲ್ಲಿದ್ದ ಅವರು ಬಹಳ ದಿನಗಳ ನಂತರ ಬೆಂಬಲಿಗರೊಂದಿಗೆ ಸೇರಿ ಇಲ್ಲಿನ ಮೀನಾಕ್ಷಿ ಭವನದಲ್ಲಿ ಮಸಾಲೆ ದೋಸೆ, ಉದ್ದಿನವಡೆ ತಿಂದು ಚಹಾ ಸೇವಿಸಿದರು. ಪರಸ್ಪರ ಕುಶಲೋಪರಿ ವಿಚಾರಿಸಿದರು. ಈ ಸಂದರ್ಭದಲ್ಲಿ ಸುಡಾ ಮಾಜಿ ಅಧ್ಯಕ್ಷ ಜ್ಯೋತಿಪ್ರಕಾಶ್, ನಗರಸಭೆ ಮಾಜಿ ಸದಸ್ಯ ಎನ್.ಜೆ.ರಾಜಶೇಖರ್, ಬಿಜೆಪಿ ನಗರ ಘಟಕದ ಅಧ್ಯಕ್ಷ ಜಗದೀಶ್, ಮುಖಂಡರಾದ ರಾಜೇಶ್ ಕಾಮತ್, ದಿವಾಕರಶೆಟ್ಟಿ, ಮುರಳೀಧರ, ಸತೀಶ ಹಾಜರಿದ್ದರು.