ಗಣೇಶ್ ಅವರು ಬೆಳಲಮಕ್ಕಿಯ ಸುರೇಶ್, ಉಮಾ ದಂಪತಿ ಏಕೈಕ ಪುತ್ರ. ಸುರೇಶ್ ಅವರು ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದು, ಉಮಾ ಅವರು ಮನೆಯಲ್ಲಿ ಅಡಿಕೆ ಸುಲಿಯುವ ಕೆಲಸ ಮಾಡುತ್ತಾರೆ. ಗಣೇಶ್ ಪತ್ರಿಕೆ ಹಂಚುವ ಮೂಲಕ ಬರುತ್ತಿದ್ದ ಆದಾಯದಿಂದ ಕುಟುಂಬದ ನಿರ್ವಹಣೆ ನಡೆಯುತ್ತಿತ್ತು. ಗಣೇಶ್ ಅಕಾಲಿಕ ನಿಧನದಿಂದ ಅವರ ಕುಟುಂಬ ಕಂಗಾಲಾಗಿದೆ.