ಶಿವಮೊಗ್ಗ: ಗೊಂದಿ ನಾಲೆಅಣೆಕಟ್ಟು ಪ್ರದೇಶವನ್ನು ಪ್ರವಾಸೋದ್ಯಮ ಸ್ಥಳವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಭದ್ರಾ ‘ಕಾಡಾ’ ಅಧ್ಯಕ್ಷೆ ಪವಿತ್ರ್ರಾ ರಾಮಯ್ಯಹೇಳಿದರು.
ಹಿರಿಯೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಗೊಂದಿಬಳಿಭದ್ರಾ ನದಿಗೆ ಅಡ್ಡಲಾಗಿ ನಿರ್ಮಾಣವಾಗಿರುವ ಗೊಂದಿ ಅಣೆಕಟ್ಟೆ ವೀಕ್ಷಿಸಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.
ಗೊಂದಿ ನಾಲೆಅಣೆಕಟ್ಟೆಅಭಿವೃದ್ಧಿಪಡಿಸಿದರೆಈ ಭಾಗದಲ್ಲಿ ಪ್ರವಾಸೋದ್ಯಮಬಲಗೊಳ್ಳುತ್ತದೆ. ನೂರಾರು ಜನರ ನಿತ್ಯ ಜೀವನಕ್ಕೆ ಅನುಕೂಲವಾಗುತ್ತದೆ. ಳೀಯ ಆಡಳಿತಕ್ಕೆ, ರಾಜ್ಯ ಸರ್ಕಾರಕ್ಕೆ ಆದಾಯ ಬರುತ್ತದೆಎಂದರು.
ಅಣೆಕಟ್ಟೆಯನ್ನು ಉನ್ನತೀಕರಿಸಿದರೆಸುತ್ತಲಿರುವ ಹನ್ನೊಂದು ನೀರು ಬಳಕೆದಾರರ ಸಹಕಾರ ಸಂಘಗಳಿಗೆ, ಸಾವಿರಾರು ರೈತರಿಗೆ ಅನುಕೂಲವಾಗುತ್ತದೆ. ಈ ಕುರಿತು ಮುಖ್ಯಮಂತ್ರಿ, ಸಂಸದರಿಗೆ ಸೂಕ್ತ ಅನುದಾನ ಬಿಡುಗಡೆ ಮಾಡಲು ಮನವಿ ಸಲ್ಲಿಸಲಾಗುವುದುಎಂದು ಭರವಸೆ ನೀಡಿದರು.