<p>ಮಲೆನಾಡು ದಾಟಿ ಬಯಲುಸೀಮೆಗೆ ಮುನ್ನುಡಿ ಬರೆಯುವ ಶಿವಮೊಗ್ಗ ಜಿಲ್ಲೆಯ ಸೊರಬ–ಶಿಕಾರಿಪುರ ಭಾಗದಲ್ಲಿ ಕೆರೆ ಬೇಟೆ ಎಂದರೆ ವಿಶೇಷ ಹಬ್ಬವೇ ಸರಿ. ಬೇಸಿಗೆಯಲ್ಲಿ ನಡೆಯುವ ಈ ಸಂಪ್ರದಾಯಕ್ಕೆ ಸಾವಿರಾರು ಮೀನುಪ್ರಿಯರು ಸಾಕ್ಷಿಯಾಗುತ್ತಾರೆ. ದೇವಸ್ಥಾನ, ಕೆರೆ ಹಾಗೂ ಊರಿನ ಅಭಿವೃದ್ಧಿಗಾಗಿ ನಿಗದಿತ ಶುಲ್ಕ ಪಡೆದು ಕೆರೆಯಲ್ಲಿರುವ ಮೀನುಗಳನ್ನು ಹಿಡಿಯಲು ಅವಕಾಶ ನೀಡಲಾಗುತ್ತದೆ. ಮೀನು ಹೆಚ್ಚು ಸಿಕ್ಕರೆ ಲಾಭ, ಇಲ್ಲದಿದ್ದರೆ ದೇವರಿಗೆ ಭಕ್ತಿ ಸಮರ್ಪಣೆ ಎಂಬ ಭಾವನೆಯೇ ಇಲ್ಲಿ ಮುಖ್ಯ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>