ತೋಟಕ್ಕೆ ಬಂದ ಗಣ್ಯರಿಗೆ ರೋಗದ ಗಂಭೀರತೆ ಮನವರಿಕೆ ಮಾಡಲು ರೈತ ಹರೀಶ್ ಅವರ ಮನೆಯ ಪಕ್ಕದಲ್ಲಿ ಆರೋಗ್ಯಕರ ಅಡಿಕೆ ಗಿಡದ ಎಲೆಗಳು, ಹಿಂಗಾರ, ಗೊನೆ, ಅಡಿಕೆ ಕಾಯಿ ಹಾಗೂ ಎಲೆಚುಕ್ಕಿ ಬಾಧಿತ ಅಡಿಕೆ ಗಿಡದ ಎಲೆ, ಒಣಗಿದ ಹಿಂಗಾರ, ಗೊನೆ, ಈಗ ಬಳಕೆ ಮಾಡುತ್ತಿರುವ ಔಷಧವನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಕೆಳದಿ ಶಿವಪ್ಪ ನಾಯಕ ಕೃಷಿ, ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ.ಆರ್.ಸಿ. ಜಗದೀಶ್ ಹಾಗೂ ತೋಟಗಾರಿಕೆ ಇಲಾಖೆ ನಿರ್ದೇಶಕ ಡಾ.ನಾಗೇಂದ್ರ ಪ್ರಸಾದ್ ಗ್ರಾಮಕ್ಕೆ ಬಂದಿದ್ದರು. ರೈತರೊಂದಿಗೆ ಚರ್ಚೆ ನಡೆಸಿದರು.