‘ಬಡ್ತಿಗೆ ಸಂಬಂಧಿಸಿದಂತೆ ನೌಕರರೇ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇರುವಾಗ ಹೊಸ ಹುದ್ದೆಗಳನ್ನು ಸೃಷ್ಟಿಸಿ ಬಡ್ತಿ ನೀಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಹೆಚ್ಚು ಹಣಕೊಟ್ಟವರಿಗೆ ನಿಯಮ 42ರ ಅಡಿ ಉಪ ವಲಯ ಅರಣ್ಯಾಧಿಕಾರಿಗಳಾಗಿ, ಕಡಿಮೆ ಹಣ ಕೊಟ್ಟವರಿಗೆ ನಿಯಮ 32ರ ಅಡಿ ಹಿರಿಯ ಅರಣ್ಯ ರಕ್ಷಕರಾಗಿ ಬಡ್ತಿ ನೀಡಿದ್ದಾರೆ. ಹಣ ನೀಡದವರಿಗೆ ಹಿಂಬಡ್ತಿ ನೀಡಿದ್ದಾರೆ. ಈ ಕುರಿತು ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.