650 ಎಕರೆ ವಿಸ್ತೀರ್ಣದ ಧಾಮದಲ್ಲಿ ಕಾಡುಕೋಣ, ಕಾಡೆಮ್ಮೆ ಸಫಾರಿಗಾಗಿ 65 ಎಕರೆಯಲ್ಲಿ ಪ್ರತ್ಯೇಕ ಕಾರಿಡಾರ್ ನಿರ್ಮಿಸಲಾಗಿದೆ. ತಡೆಬೇಲಿ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ. ಮೈಸೂರು ಮೃಗಾಲಯದಿಂದ 25 ಕಾಡುಕೋಣ, ಕಾಡೆಮ್ಮೆ ತರುವ ಪ್ರಕ್ರಿಯೆ ಏಪ್ರಿಲ್ ಕೊನೆಯ ವಾರದಲ್ಲಿ ಆರಂಭಗೊಳ್ಳುವ ಸಾಧ್ಯತೆ ಇದೆ. ಹುಲಿ ಮತ್ತು ಸಿಂಹಗಳಿಗಾಗಿ ಪ್ರತ್ಯೇಕ ಸಫಾರಿ ವ್ಯವಸ್ಥೆ ಇದೆ. ಹುಲಿ, ಸಿಂಹ ಸಫಾರಿಯ ನಂತರ ಅದೇ ವಾಹನಗಳು ಕಾಡುಕೋಣ ಸಫಾರಿಗೆ ಸಾಗಲಿವೆ.