1972ರಲ್ಲಿ 70ರಷ್ಟಿದ್ದ ವಕೀಲರ ಸಂಖ್ಯೆ ಈಗ 1,250 ದಾಟಿದೆ. ಮಾಜಿ ಮುಖ್ಯಮಂತ್ರಿಗಳಾದ ಕಡಿದಾಳ್ ಮಂಜಪ್ಪ, ಜೆ.ಎಚ್. ಪಟೇಲ್, ಎಸ್.ಬಂಗಾರಪ್ಪ ಮತ್ತಿತರ ಗಣ್ಯರು ಈ ಸಂಘದ ಸದಸ್ಯರಾಗಿದ್ದರು. ನ್ಯಾಯಾಲಯಕ್ಕೆ ಬರುವ ಕಕ್ಷಿದಾರರು, ಪೊಲೀಸ್ ವಾಹನಗಳು, ಸರ್ಕಾರಿ ನೌಕರರ ವಾಹನಗಳ ನಿಲುಗಡೆಗೆ ಜಾಗ ಸಾಕಾಗುತ್ತಿಲ್ಲ. ಆದರೂ, ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸಿ ನಿಯಮಬಾಹಿರವಾಗಿ ವಕೀಲರ ಭವನದ ಮುಂಭಾಗ ನ್ಯಾಯಾಂಗ ನೌಕರರರ
ಸಂಘ ಅನುಮತಿ ಪಡೆಯದೆ ಸ್ಥಳದಲ್ಲಿದ್ದ ದೊಡ್ಡ ಮರ ಕಡಿದು ಹೊಸ ಕಟ್ಟಡ ನಿರ್ಮಿಸಲು ಮುಂದಾಗಿದೆ ಎಂದು ದೂರಿದರು.