ಶಿವಮೊಗ್ಗ: ತಾಯಿಯನ್ನು ನಿಂದಿಸಿದ ಕಾರಣಆಕ್ರೋಶಗೊಂಡ ಪುತ್ರ ತಂದೆಯನ್ನೇ ಕೊಲೆ ಮಾಡಿದ್ದಾನೆ.
ಬೊಮ್ಮನಕಟ್ಟೆ ಬಡಾವಣೆ ಸಿದ್ದಪ್ಪ ನಗರದ ಮಂಜುನಾಥ (56) ಕೊಲೆಯಾದವರು.24 ವರ್ಷದ ಪುತ್ರ ರಾಕೇಶ್ ತಂದೆಯನ್ನೇಕೊಲೆ ಮಾಡಿರುವ ಆರೋಪಿ.
ಮಂಜುನಾಥ ಅವರ ಹಿರಿಯ ಪುತ್ರಿ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು.ತಾಯಿ ಕೂಡ ಆಸ್ಪತ್ರೆಗೆ ತೆರಳಿದ್ದರು.ಮದ್ಯ ಸೇವಿಸಿ ಸೋಮವಾರ ರಾತ್ರಿ ಮನೆಗೆ ಬಂದಿದ್ದ ಮಂಜುನಾಥ ಮಗನ ಜತೆಜಗಳಮಾಡಿದ್ದಾರೆ.ಪತ್ನಿಯನ್ನು ನಿಂದಿಸಿದ್ದಾರೆ.
‘ತಂದೆಯ ಮಾತಿನಿಂದ ಕುಪಿತಗೊಂಡ ರಾಕೇಶ್ ಕಬ್ಬಿಣದ ರಾಡ್ನಿಂದತಲೆಗೆ ಹೊಡೆದಿದಿದ್ದಾನೆ. ಮಂಜುನಾಥ ಸ್ಥಳದಲ್ಲೇ ಮೃತಪಟ್ಟಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದರು.ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.