ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಯಿ ನಿಂದನೆ: ತಂದೆಯನ್ನೇ ಕೊಂದ ಪುತ್ರ

Last Updated 14 ಜುಲೈ 2020, 12:53 IST
ಅಕ್ಷರ ಗಾತ್ರ

ಶಿವಮೊಗ್ಗ: ತಾಯಿಯನ್ನು ನಿಂದಿಸಿದ ಕಾರಣಆಕ್ರೋಶಗೊಂಡ ಪುತ್ರ ತಂದೆಯನ್ನೇ ಕೊಲೆ ಮಾಡಿದ್ದಾನೆ.

ಬೊಮ್ಮನಕಟ್ಟೆ ಬಡಾವಣೆ ಸಿದ್ದಪ್ಪ ನಗರದ ಮಂಜುನಾಥ (56) ಕೊಲೆಯಾದವರು.24 ವರ್ಷದ ಪುತ್ರ ರಾಕೇಶ್ ತಂದೆಯನ್ನೇಕೊಲೆ ಮಾಡಿರುವ ಆರೋಪಿ.

ಮಂಜುನಾಥ ಅವರ ಹಿರಿಯ ಪುತ್ರಿ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು.ತಾಯಿ ಕೂಡ ಆಸ್ಪತ್ರೆಗೆ ತೆರಳಿದ್ದರು.ಮದ್ಯ ಸೇವಿಸಿ ಸೋಮವಾರ ರಾತ್ರಿ ಮನೆಗೆ ಬಂದಿದ್ದ ಮಂಜುನಾಥ ಮಗನ ಜತೆಜಗಳಮಾಡಿದ್ದಾರೆ.ಪತ್ನಿಯನ್ನು ನಿಂದಿಸಿದ್ದಾರೆ.

‘ತಂದೆಯ ಮಾತಿನಿಂದ ಕುಪಿತಗೊಂಡ ರಾಕೇಶ್ ಕಬ್ಬಿಣದ ರಾಡ್‌ನಿಂದತಲೆಗೆ ಹೊಡೆದಿದಿದ್ದಾನೆ. ಮಂಜುನಾಥ ಸ್ಥಳದಲ್ಲೇ ಮೃತಪಟ್ಟಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದರು.ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT