ಭದ್ರಾವತಿ ಹಸೂರು ಸಿದ್ದಾಪುರದ ಅಹಮದ್ ಅಯೂಬ್ ಅವರು ಶಿವಮೊಗ್ಗ ಕೆಎಸ್ಆರ್ಟಿಸಿ ನಿಲ್ದಾಣದ ಎಟಿಎಂನಲ್ಲಿ ಹಣ ಡ್ರಾ ಮಾಡುವಾಗ ತಾಂತ್ರಿಕ ಸಮಸ್ಯೆಯಾಗಿದೆ. ಅಲ್ಲೇ ಇದ್ದ ಆರೋಪಿಯ ಸಹಾಯ ಕೇಳಿದ್ದಾರೆ. ಆಗ ಸಹಾಯ ಮಾಡುವ ನೆಪದಲ್ಲಿ ಆತ ವಂಚಿಸಿದ್ದಾನೆ. ನಂತರ ₨ 37,887 ಡ್ರಾ ಮಾಡಿಕೊಂಡಿದ್ದಾನೆ. ಇನ್ಸ್ಪೆಕ್ಟರ್ ಗುರುರಾಜ್ ಕರ್ಕಿ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ.