ದಂತಿ ಅವರ ಕುರಿತ ‘ಅನನ್ಯ ಅಭಿನಂದನಾ ಗ್ರಂಥ’ವನ್ನು ಲೋಕಾರ್ಪಣೆ ಮಾಡಿದ ಶಿಕ್ಷಣ ತಜ್ಞ ಡಾ. ಗುರುರಾಜ ಕರಜಗಿ, ‘ದಂತಿಯವರ ಚೈತನ್ಯ ಸಮಾಜಕ್ಕೆ ಅನುಕರಣೀಯ. ಲೋಕೋಪಯೋಗಿ ಇಲಾಖೆ ನೌಕರರಾಗಿ, ಹಿಂದಿ ಶಿಕ್ಷಕರಾಗಿ, ಖಾಸಗಿ ಗ್ರಂಥಾಲಯ ಸ್ಥಾಪಿಸುವ ಮೂಲಕ ಪುಸ್ತಕ ಸಂಸ್ಕೃತಿ ಪ್ರಸಾರಕರಾಗಿ ದಂತಿಯವರು ವಿವಿಧ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಮೂಲ್ಯ. ದಂತಿಯವರ ಈ ಹೊತ್ತಿನ ಎಲ್ಲ ಸಾಧನೆಗೆ ಪತ್ನಿ ಶಾಂತಾ ದಂತಿ ಮತ್ತು ಮಕ್ಕಳು ಬೆನ್ನೆಲುಬಾಗಿ ನಿಂತಿದ್ದಾರೆ. ಬದುಕಿನಲ್ಲಿ ಸಾರ್ಥಕತೆಯ ಹೆಜ್ಜೆ ಗುರುತು ಉಳಿಸಿರುವ ದಂತಿ ಮಾದರಿ ಜೀವನ ನಡೆಸಿದವರು’ ಎಂದು ತಿಳಿಸಿದರು.