ಮಾಜಿ ಶಾಸಕ ವೈ.ಎಸ್.ವಿ ದತ್ತಾ ಮಾತನಾಡಿ, ಹಿಂದೆ ಕಿಡಿ ಶೇಷಪ್ಪ ಅವರು ತಮ್ಮ ‘ಕಿಡಿ‘ ಪತ್ರಿಕೆಯಲ್ಲಿ ವಿಧಾನ ಸೌಧ ನಿರ್ಮಾಣ ಕಾಮಗಾರಿಯಲ್ಲಿ ಭ್ರಷ್ಟಾಚಾರದ ವಾಸನೆ ಇದೆ ಎಂದು ಲೇಖನ ಬರೆದಿದ್ದರು. ಅದನ್ನು ಗಮನಿಸಿದ ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರು, ಛೇ.. ನಾನು ಆ ರೀತಿ ಇಲ್ಲ. ಯಾಕೆ ಈ ರೀತಿ ಬರೆದರು ಎಂದು ಗಾಬರಿಯಿಂದ ಕಿಡಿ ಶೇಷಪ್ಪ ಅವರ ಮನೆಗೆ ತೆರಳಿ, ಅವರಿಗೆ ಮನವರಿಕೆ ಮಾಡಿದ್ದರು ಎಂದರು.