‘ಸಮಿತಿ ರಚನೆಯಲ್ಲಿ ಹಿಂದುತ್ವದ ಕೈವಾಡ ಇರುವುದು ಸ್ಪಷ್ಟಗೊಳ್ಳುತ್ತಿದೆ. ಹಿಂದೆ ಹಿಂದೂಸ್ಥಾನ, ಪಾಕಿಸ್ತಾನ ಎಂದು ಹೇಳುತ್ತಾ ಜನರನ್ನು ಒಡೆದು ಆಳಲಾಗುತ್ತಿತ್ತು. ಈಗ ಹಿಂದುಳಿದವರ ದಮನಕ್ಕೆ ಮುಂದಾಗಿದ್ದಾರೆ. ಇದರ ಹಿಂದೆ ಹಿಂದುಳಿದ ವರ್ಗಗಳ ಆಸ್ತಿ ಕಬಳಿಕೆಯ ಷಡ್ಯಂತ್ರ ಅಡಗಿದೆ. ಯಡಿಯೂರಪ್ಪ ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಸಾರಾಯಿ ಬಂದ್ ಮಾಡಲಾಗಿತ್ತು. ಆಗ ಸಾರಾಯಿ ಮಾರುವ ಸಾವಿರಾರು ಕುಟುಂಬಗಳು ಪರ್ಯಾಯ ವ್ಯವಸ್ಥೆ ಇಲ್ಲದೆ ಬೀದಿಪಾಲಾದವು. ಇದಕ್ಕೆ ಯಾರು ಜವಾಬ್ದಾರಿ’ ಎಂದು ಪ್ರಶ್ನಿಸಿದರು.