ರಂಗಾಯಣವು ಸರ್ಕಾರದ ಅಧೀನ ಸಂಸ್ಥೆಯಾಗಿದ್ದು, ಇಲ್ಲಿ ಹಲವೆಡೆಯ ಕಲಾವಿದರು, ತಂತ್ರಜ್ಞರು ಇದ್ದರು. ಎಲ್ಲರೂ ಬಣ್ಣ ಹಚ್ಚದೇ ಕಸಿವಿಸಿಗೊಂಡಿದ್ದರು. ಲಾಕ್ಡೌನ್ ಅವಧಿಯಲ್ಲೂ ಕಲಾವಿದರು, ತಂತ್ರಜ್ಞರು ಸುಮ್ಮನೆ ಕುಳಿತುಕೊಳ್ಳಲಿಲ್ಲ. ‘ಸಂಸಾರ ರಂಗತಾರ’ ಎಂಬ ನಾಟಕವನ್ನು ಸಿದ್ಧಮಾಡಿ ಆನ್ಲೈನ್ನಲ್ಲಿ ಪ್ರಸಾರ ಮಾಡಿದ್ದರು.