ತೀರ್ಥಹಳ್ಳಿ: ಭದ್ರಾ ಅಭಯಾರಣ್ಯ ವ್ಯಾಪ್ತಿಯ ಕಡೆಯಿಂದ ಬಂದಿರುವ ಐದು ಆನೆಗಳು ತಾಲ್ಲೂಕಿನ ಮುಡುಬ ಸಮೀಪದ ಕೋಣನಕೆರೆ ಗ್ರಾಮದಲ್ಲಿ ಮೂರು ದಿನಗಳಿಂದ ಬೀಡುಬಿಟ್ಟಿವೆ. ಕೋಣನಕೆರೆ ಕೃಷ್ಣಮೂರ್ತಿ ಗೌಡ ಎಂಬುವವರ ತೋಟದಲ್ಲಿ 200ಕ್ಕೂ ಹೆಚ್ಚು ಅಡಿಕೆ ಮರಗಳು ಆನೆ ದಾಳಿಗೆ ತುತ್ತಾಗಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.