ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಜೀವವೈವಿಧ್ಯ ಸಮಿತಿಗಳ ಪುನರ್ರಚನೆ, ಸಂಸದರು, ಶಾಸಕರು, ವಕೀಲರು, ನ್ಯಾಯಾಧೀಶರಿಗೆ ಜೀವವೈವಿಧ್ಯ ಕಾಯಿದೆ ಮಹತ್ವದ ಕುರಿತು ಇನ್ನಷ್ಟು ಮಾಹಿತಿ ನೀಡುವುದು. ಯಾದಗಿರಿ ಜಿಲ್ಲೆಯಲ್ಲಿನ ಜೈವಿಕ ತಾಣಗಳ ಘೋಷಣೆ, ಖಾನಾಪುರತಾಲ್ಲೂಕು ಕುಣಕುಂಬಿ ಮಲಪ್ರಭಾ ನದಿ ಮೂಲಕ್ಕೆ ಜೀವ ವೈವಿಧ್ಯ ಮಾನ್ಯತೆ, ಸರ್ಕಾರ ಘೋಷಿಸಿರುವ 2.3 ಲಕ್ಷ ಹೆಕ್ಟೇರ್ಡೀಮ್ಡ್ ಅರಣ್ಯದ ರಕ್ಷಣೆಗೆ ಅನುದಾನ ನೀಡಲು ಮಂಡಳಿ ಮುಖ್ಯಮಂತ್ರಿಗೆ ಶಿಫಾರಸು ಮಾಡಬೇಕು. ಜಿಲ್ಲಾ ಮಟ್ಟದಲ್ಲಿಜೀವವೈವಿಧ್ಯ ಪ್ರಶಸ್ತಿ ನೀಡಿಕೆ, 6,000 ಪಂಚಾಯ್ತಿಗಳಲ್ಲಿ ಜೀವವೈವಿಧ್ಯ ಅಭಿಯಾನ, ರಾಜ್ಯದ 15 ಸ್ಥಳಗಳನ್ನು ಪಾರಂಪರಿಕ ಜೀವವೈವಿಧ್ಯ ತಾಣ ಎಂದು ಘೋಷಣೆ, ಜಿಲ್ಲಾಧಿಕಾರಿ ಮಟ್ಟದಲ್ಲಿ ಪ್ರಗತಿ ಪರೀಶೀಲನಾ ಸಭೆ, ಮಾದರಿ ಜೀವವೈವಿಧ್ಯತಾ ಸಮಿತಿ ಯೋಜನೆ, ಮತ್ಸ್ಯಧಾಮಗಳ ಘೋಷಣೆ, ಪಾರಂಪರಿಕ ವೃಕ್ಷಗಳ ಘೋಷಣೆ, ಜೀವವೈವಿಧ್ಯ ಕಾಯಿದೆ ಜಾರಿಗೆ ಒತ್ತಾಯಿಸಿದರು.