ಲಂಡನ್ನಿಂದ ತಂದಿದ್ದ ಪ್ರತಿಮೆ ಗೋದಾಮಿನಲ್ಲೇ ಮಲಗಿತ್ತು. ಈ ಕುರಿತು ಹಲವು ಪ್ರತಿಭಟನೆಗಳು ನಡೆದಿದ್ದವು. ಬಸವಕೇಂದ್ರ, ವೀರಶೈವ ಮಹಾಸಭಾ,ಶರಣ ಸಾಹಿತ್ಯ ಪರಿಷತ್ತು ಮೊದಲಾದ ಸಂಘಟನೆಗಳು, ನಿರಂತರ ಮನವಿ ಸಲ್ಲಿದ್ದವು.ಪಾಲಿಕೆ ಸಾಮಾನ್ಯ ಸಭೆಯಲ್ಲೂ ಚರ್ಚೆಗಳು ನಡೆದು ಆಕ್ರೋಶ ವ್ಯಕ್ತವಾಗಿತ್ತು. ಕೊನೆಗೂಪುತ್ಥಳಿ ಸ್ಥಾಪನೆಗೆ ಇದ್ದ ಕಾನೂನು ತೊಡಕುಗಳು ನಿವಾರಣೆ
ಯಾಗಿವೆ. ಸರ್ಕಾರದ ಅನುಮತಿ ದೊರೆತಿದೆ.