ದಾಖಲೆ ಪರಿಶೀಲಿಸಿದ ಕೋರ್ಟ್ ಗಾಯತ್ರಿ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಳ್ಳುವಂತೆ ಕೋಟೆ ಪೊಲೀಸರಿಗೆ ಸೂಚಿಸಿತ್ತು. ನಂತರ ಅವರು ಕೋರ್ಟ್ ನಿರ್ಧಾರಕ್ಕೆ ತಡೆಯಾಜ್ಞೆ ತಂದಿದ್ದರು. 2018ರಲ್ಲಿ ತಡೆಯಾಜ್ಞೆ ತೆರವುಗೊಂಡಿತ್ತು. ಆದರೂ, ವಿಶ್ವ ವಿದ್ಯಾಲಯ ಕ್ರಮ ಕೈಗೊಂಡಿರಲಿಲ್ಲ. ಈಚೆಗೆ ದಲಿತ ಸಂಘಟನೆಗಳು ಒತ್ತಡ ಹಾಕಿದ ಕಾರಣ ಜೂನ್ 29ರಂದು ಕುಲಸಚಿವ ಎಸ್.ಎಸ್.ಪಾಟೀಲ ಅಮಾನತು ಆದೇಶ ಹೊರಡಿಸಿದ್ದಾರೆ.