ನಿಟ್ಟೂರು ಸಮೀಪದ ಅಮಡೆ ಗ್ರಾಮದ ರೈತ ಲಕ್ಷ್ಮಿನಾರಾಯಣ ನಿಟ್ಟೂರು ಕೆನರಾ ಬ್ಯಾಂಕ್ ಶಾಖೆಯಲ್ಲಿ ₹ 35,000 ಕೃಷಿ ಸಾಲ ಪಡೆದಿದ್ದರು. ಸರ್ಕಾರದ ಸಾಲ ಮನ್ನಾ ಯೋಜನೆಯಲ್ಲಿ ₹ 32,000 ಮನ್ನಾ ಆಗಿತ್ತು. ಉಳಿದ ₹ 3 ಸಾವಿರವನ್ನು ಕೆಲವು ತಿಂಗಳ ಹಿಂದೆ ಬಡ್ಡಿ ಸಮೇತ ಕಟ್ಟಿದ್ದರು. ಆದರೆ, ಶುಕ್ರವಾರ ಬ್ಯಾಂಕ್ನಿಂದ ಫೋನ್ ಕರೆ ಬಂದಾಗ ಅವರು ಗಾಬರಿಗೊಂಡು ಕೃಷಿ ಕೆಲಸ ಬಿಟ್ಟು ಓಡೋಡಿ ಬಂದರು. ಕೊರೊನಾ ಲಾಕ್ಡೌನ್ ಕಾರಣ ಬಸ್ ಸೌಲಭ್ಯವೂ ಇಲ್ಲದಿರುವುದರಿಂದ ಕುಗ್ರಾಮದಿಂದ ನಡೆದು ಬಂದು ಚಿಲ್ಲರೆ ಸಾಲ ಕಟ್ಟಿದ್ದಾರೆ.