<p><strong>ಭದ್ರಾವತಿ</strong>: ಬೇಸಿಗೆ ಆರಂಭವಾಗಿದ್ದು, ಅರಣ್ಯ ಸಂಪತ್ತನ್ನು ಕಾಳ್ಗಿಚ್ಚಿನಿಂದ ರಕ್ಷಿಸಲು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಭದ್ರಾವತಿ ವಿಭಾಗ ಅರಣ್ಯ ವ್ಯಾಪ್ತಿಯಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ.</p>.<p>ಭದ್ರಾವತಿ ವಿಭಾಗದ ವ್ಯಾಪ್ತಿಯಲ್ಲಿ ಭದ್ರಾವತಿ, ಉಂಬ್ಳೆಬೈಲು, ತರೀಕೆರೆ, ಅಜ್ಜಂಪುರ, ಶಾಂತಿಸಾಗರ, ಚನ್ನಗಿರಿ ಹಾಗೂ ಲಕ್ಕವಳ್ಳಿ ಅರಣ್ಯ ವಲಯಗಳು ಬರುತ್ತವೆ. ಇಲ್ಲಿ ಒಟ್ಟು 92,658 ಹೆಕ್ಟೇರ್ ಪ್ರದೇಶದಲ್ಲಿ ಅರಣ್ಯ ಸಂಪತ್ತು ವ್ಯಾಪಿಸಿದೆ. ಬೀಟೆ, ಸಾಗುವಾನಿ, ನಂದಿ, ಹೊನ್ನೆ, ಶ್ರೀಗಂಧ, ಬೇವು ಇಲ್ಲಿ ಹೆಚ್ಚಾಗಿ ಕಂಡುಬರುವ ಮರಗಳು. ಭದ್ರಾವತಿ ವಲಯ ಅರಣ್ಯ ಆನೆ, ಚಿರತೆ, ಕರಡಿ, ಜಿಂಕೆ ಮೊದಲಾದ ಪ್ರಾಣಿಗಳ ಆವಾಸ ಸ್ಥಳ.</p>.<p>ಕಾಳ್ಗಿಚ್ಚು ತಡೆಯಲು ತೆಗೆದುಕೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಉಪ ಅರಣ್ಯ ಸಂರಕ್ಷಾಣಾಧಿಕಾರಿ ರವೀಂದ್ರಕುಮಾರ್ ಬಿ.ಎಂ, ‘ಭದ್ರಾವತಿ ಅರಣ್ಯ ವ್ಯಾಪ್ತಿಯಲ್ಲಿ ಈ ವರ್ಷ 176 ಹೊಸ ಬೆಂಕಿ ನಂದಕ ಗೆರೆಗಳನ್ನು (ಫೈರ್ಲೈನ್) ನಿರ್ಮಿಸಲಾಗಿದೆ. ಇದಲ್ಲದೆ ಅಸ್ತಿತ್ವದಲ್ಲಿರುವ 700 ಬೆಂಕಿ ನಂದಕ ಗೆರೆಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡಲಾಗಿದೆ’ ಎಂದು ತಿಳಿಸಿದರು.</p>.<p>ಇಲಾಖೆ ವ್ಯಾಪ್ತಿಯಲ್ಲಿ ಹಾಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯಲ್ಲದೆ, ಕಾಳ್ಗಿಚ್ಚು ತಡೆಗಟ್ಟಲು ಮಾರ್ಚ್ ತಿಂಗಳಲ್ಲಿ ಭದ್ರಾವತಿ ವಿಭಾಗದ ವ್ಯಾಪ್ತಿಯ ಪ್ರತಿ ವಲಯದಲ್ಲೂ ತಲಾ ಮೂವರು ಹೆಚ್ಚುವರಿ ವಾಚರ್ಗಳನ್ನು ದಿನಗೂಲಿ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. ಪ್ರತಿ ವಲಯದಲ್ಲೂ ಅರಣ್ಯದ ಅಂಚಿನಲ್ಲಿರುವ ಗ್ರಾಮಗಳಲ್ಲಿ ಬೀದಿ ನಾಟಕಗಳ ಮೂಲಕ ಕಾಳ್ಗಿಚ್ಚನ್ನು ತಡೆಗಟ್ಟುವ ವಿಚಾರದಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗಿದೆ. ಒಟ್ಟು 11 ಕಡೆ ಬೀದಿ ನಾಟಕ ಪ್ರದರ್ಶಿಸಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಕೆಲವು ಕಡೆ ಬೆಂಕಿ ನಂದಿಸುವ ಅಣಕು ಕಾರ್ಯಾಚರಣೆಯನ್ನೂ ನಡೆಸಿದ್ದಾರೆ ಎಂದರು.</p>.<p>ಭದ್ರಾವತಿ ವಿಭಾಗದ ವ್ಯಾಪ್ತಿಯಲ್ಲಿ ನಿತ್ಯಹರಿದ್ವರ್ಣ, ಅರೆ–ನಿತ್ಯಹರಿದ್ವರ್ಣ, ತೇವಭರಿತ ಎಲೆ ಉದುರುವ ಹಾಗೂ ಒಣ ಎಲೆ ಉದುರುವ ಕಾಡುಗಳು ಇವೆ. ಇದರಲ್ಲಿ ತೇವಭರಿತ ಎಲೆ ಉದುರುವ ಹಾಗೂ ಒಣ ಎಲೆ ಉದುರುವ ಕಾಡು ಹೆಚ್ಚು ಇರುವ ಅಜ್ಜಂಪುರ, ಶಾಂತಿಸಾಗರ ಹಾಗು ಚನ್ನಗಿರಿ ವಲಯಗಳಲ್ಲಿ ಕಾಳ್ಗಿಚ್ಚು ಪ್ರಕರಣಗಳು ಹೆಚ್ಚು ವರದಿಯಾಗುವುದರಿಂದ ಈ ಪ್ರದೇಶಗಳ ಮೇಲೆ ವಿಶೇಷ ನಿಗಾ ಇರಿಸಲಾಗಿದೆ.</p>.<p>ಭದ್ರಾವತಿ ವಿಭಾಗ ವ್ಯಾಪ್ತಿಯಲ್ಲಿ 2024–25 ನೇ ಸಾಲಿನಲ್ಲಿ 672 ಸಣ್ಣ ಮಟ್ಟದ ನೆಲಬೆಂಕಿ ಪ್ರಕರಣಗಳು ವರದಿಯಾಗಿದ್ದರೆ, 2025–26ನೇ ಸಾಲಿನಲ್ಲಿ 730 ಸಣ್ಣ ಮಟ್ಟದ ಪ್ರಕರಣಗಳು ವರದಿಯಾಗಿವೆ. ‘ಈ ಪ್ರಕರಣಗಳಲ್ಲಿ ತಕ್ಷಣವೇ ಬೆಂಕಿ ನಂದಿಸಿ ಅರಣ್ಯ ರಕ್ಷಿಸಲಾಗಿದೆ. ಬೇಸಿಗೆ ಆರಂಭಕ್ಕೆ ಮುನ್ನವೇ ಮುಂಜಾಗ್ರತಾ ಕ್ರಮ ಕೈಗೊಳ್ಳುವುದರಿಂದ, ಭದ್ರಾವತಿ ವಿಭಾಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ದೊಡ್ಡ ಪ್ರಕರಣ ಯಾವುದೂ ವರದಿಯಾಗಿಲ್ಲ ಎಂದು ಹೇಳಿದರು.</p>.<p> ವಿಭಾಗ ವ್ಯಾಪ್ತಿಯಲ್ಲಿ 92,658 ಹೆಕ್ಟೇರ್ ಅರಣ್ಯ 176 ಹೊಸ ಬೆಂಕಿ ನಂದಕ ಗೆರೆ ನಿರ್ಮಾಣ ಅಸ್ತಿತ್ವದಲ್ಲಿರುವ ಬೆಂಕಿ ನಂದಕ ಗೆರೆ ನಿರ್ವಹಣೆ </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭದ್ರಾವತಿ</strong>: ಬೇಸಿಗೆ ಆರಂಭವಾಗಿದ್ದು, ಅರಣ್ಯ ಸಂಪತ್ತನ್ನು ಕಾಳ್ಗಿಚ್ಚಿನಿಂದ ರಕ್ಷಿಸಲು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಭದ್ರಾವತಿ ವಿಭಾಗ ಅರಣ್ಯ ವ್ಯಾಪ್ತಿಯಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ.</p>.<p>ಭದ್ರಾವತಿ ವಿಭಾಗದ ವ್ಯಾಪ್ತಿಯಲ್ಲಿ ಭದ್ರಾವತಿ, ಉಂಬ್ಳೆಬೈಲು, ತರೀಕೆರೆ, ಅಜ್ಜಂಪುರ, ಶಾಂತಿಸಾಗರ, ಚನ್ನಗಿರಿ ಹಾಗೂ ಲಕ್ಕವಳ್ಳಿ ಅರಣ್ಯ ವಲಯಗಳು ಬರುತ್ತವೆ. ಇಲ್ಲಿ ಒಟ್ಟು 92,658 ಹೆಕ್ಟೇರ್ ಪ್ರದೇಶದಲ್ಲಿ ಅರಣ್ಯ ಸಂಪತ್ತು ವ್ಯಾಪಿಸಿದೆ. ಬೀಟೆ, ಸಾಗುವಾನಿ, ನಂದಿ, ಹೊನ್ನೆ, ಶ್ರೀಗಂಧ, ಬೇವು ಇಲ್ಲಿ ಹೆಚ್ಚಾಗಿ ಕಂಡುಬರುವ ಮರಗಳು. ಭದ್ರಾವತಿ ವಲಯ ಅರಣ್ಯ ಆನೆ, ಚಿರತೆ, ಕರಡಿ, ಜಿಂಕೆ ಮೊದಲಾದ ಪ್ರಾಣಿಗಳ ಆವಾಸ ಸ್ಥಳ.</p>.<p>ಕಾಳ್ಗಿಚ್ಚು ತಡೆಯಲು ತೆಗೆದುಕೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಉಪ ಅರಣ್ಯ ಸಂರಕ್ಷಾಣಾಧಿಕಾರಿ ರವೀಂದ್ರಕುಮಾರ್ ಬಿ.ಎಂ, ‘ಭದ್ರಾವತಿ ಅರಣ್ಯ ವ್ಯಾಪ್ತಿಯಲ್ಲಿ ಈ ವರ್ಷ 176 ಹೊಸ ಬೆಂಕಿ ನಂದಕ ಗೆರೆಗಳನ್ನು (ಫೈರ್ಲೈನ್) ನಿರ್ಮಿಸಲಾಗಿದೆ. ಇದಲ್ಲದೆ ಅಸ್ತಿತ್ವದಲ್ಲಿರುವ 700 ಬೆಂಕಿ ನಂದಕ ಗೆರೆಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡಲಾಗಿದೆ’ ಎಂದು ತಿಳಿಸಿದರು.</p>.<p>ಇಲಾಖೆ ವ್ಯಾಪ್ತಿಯಲ್ಲಿ ಹಾಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯಲ್ಲದೆ, ಕಾಳ್ಗಿಚ್ಚು ತಡೆಗಟ್ಟಲು ಮಾರ್ಚ್ ತಿಂಗಳಲ್ಲಿ ಭದ್ರಾವತಿ ವಿಭಾಗದ ವ್ಯಾಪ್ತಿಯ ಪ್ರತಿ ವಲಯದಲ್ಲೂ ತಲಾ ಮೂವರು ಹೆಚ್ಚುವರಿ ವಾಚರ್ಗಳನ್ನು ದಿನಗೂಲಿ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. ಪ್ರತಿ ವಲಯದಲ್ಲೂ ಅರಣ್ಯದ ಅಂಚಿನಲ್ಲಿರುವ ಗ್ರಾಮಗಳಲ್ಲಿ ಬೀದಿ ನಾಟಕಗಳ ಮೂಲಕ ಕಾಳ್ಗಿಚ್ಚನ್ನು ತಡೆಗಟ್ಟುವ ವಿಚಾರದಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗಿದೆ. ಒಟ್ಟು 11 ಕಡೆ ಬೀದಿ ನಾಟಕ ಪ್ರದರ್ಶಿಸಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಕೆಲವು ಕಡೆ ಬೆಂಕಿ ನಂದಿಸುವ ಅಣಕು ಕಾರ್ಯಾಚರಣೆಯನ್ನೂ ನಡೆಸಿದ್ದಾರೆ ಎಂದರು.</p>.<p>ಭದ್ರಾವತಿ ವಿಭಾಗದ ವ್ಯಾಪ್ತಿಯಲ್ಲಿ ನಿತ್ಯಹರಿದ್ವರ್ಣ, ಅರೆ–ನಿತ್ಯಹರಿದ್ವರ್ಣ, ತೇವಭರಿತ ಎಲೆ ಉದುರುವ ಹಾಗೂ ಒಣ ಎಲೆ ಉದುರುವ ಕಾಡುಗಳು ಇವೆ. ಇದರಲ್ಲಿ ತೇವಭರಿತ ಎಲೆ ಉದುರುವ ಹಾಗೂ ಒಣ ಎಲೆ ಉದುರುವ ಕಾಡು ಹೆಚ್ಚು ಇರುವ ಅಜ್ಜಂಪುರ, ಶಾಂತಿಸಾಗರ ಹಾಗು ಚನ್ನಗಿರಿ ವಲಯಗಳಲ್ಲಿ ಕಾಳ್ಗಿಚ್ಚು ಪ್ರಕರಣಗಳು ಹೆಚ್ಚು ವರದಿಯಾಗುವುದರಿಂದ ಈ ಪ್ರದೇಶಗಳ ಮೇಲೆ ವಿಶೇಷ ನಿಗಾ ಇರಿಸಲಾಗಿದೆ.</p>.<p>ಭದ್ರಾವತಿ ವಿಭಾಗ ವ್ಯಾಪ್ತಿಯಲ್ಲಿ 2024–25 ನೇ ಸಾಲಿನಲ್ಲಿ 672 ಸಣ್ಣ ಮಟ್ಟದ ನೆಲಬೆಂಕಿ ಪ್ರಕರಣಗಳು ವರದಿಯಾಗಿದ್ದರೆ, 2025–26ನೇ ಸಾಲಿನಲ್ಲಿ 730 ಸಣ್ಣ ಮಟ್ಟದ ಪ್ರಕರಣಗಳು ವರದಿಯಾಗಿವೆ. ‘ಈ ಪ್ರಕರಣಗಳಲ್ಲಿ ತಕ್ಷಣವೇ ಬೆಂಕಿ ನಂದಿಸಿ ಅರಣ್ಯ ರಕ್ಷಿಸಲಾಗಿದೆ. ಬೇಸಿಗೆ ಆರಂಭಕ್ಕೆ ಮುನ್ನವೇ ಮುಂಜಾಗ್ರತಾ ಕ್ರಮ ಕೈಗೊಳ್ಳುವುದರಿಂದ, ಭದ್ರಾವತಿ ವಿಭಾಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ದೊಡ್ಡ ಪ್ರಕರಣ ಯಾವುದೂ ವರದಿಯಾಗಿಲ್ಲ ಎಂದು ಹೇಳಿದರು.</p>.<p> ವಿಭಾಗ ವ್ಯಾಪ್ತಿಯಲ್ಲಿ 92,658 ಹೆಕ್ಟೇರ್ ಅರಣ್ಯ 176 ಹೊಸ ಬೆಂಕಿ ನಂದಕ ಗೆರೆ ನಿರ್ಮಾಣ ಅಸ್ತಿತ್ವದಲ್ಲಿರುವ ಬೆಂಕಿ ನಂದಕ ಗೆರೆ ನಿರ್ವಹಣೆ </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>